ಕೊಳವೆ ಬಾವಿಗೆ ಬಿದ್ದ 6 ವರ್ಷದ ಪುಟಾಣಿ
ಮುಂದುವರಿದ ರಕ್ಷಣಾ ಕಾರ್ಯ
ಬೆಳಗಾವಿ, ಎ.22: ಆರು ವರ್ಷದ ಬಾಲಕಿಯೊಬ್ಬಳು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ತೆರೆದ ಕೊಳವೆ ಬಾವಿಗೆ ಬಿದ್ದಿರುವ ಘಟನೆ ಅಥಣಿ ತಾಲೂಕಿನ ಝಂಜರವಾಡದಲ್ಲಿ ನಡೆದಿದೆ.
ಕಾವೇರಿ ಮಾದರ ದುರಂತಕ್ಕೆ ಒಳಗಾದ ಬಾಲಕಿ. ಶಂಕರಪ್ಪಹಿಪ್ಪರಗಿ ಎಂಬ ರೈತ ಈ ಹಿಂದೆ 400ಡಿ ಆಳದ ಕೊಳವೆ ಬಾವಿ ಕೊರೆಸಿದ್ದು, ನೀರು ಸಿಕ್ಕಿರಲಿಲ್ಲ. ಆತ ಕೊಳವೆ ಬಾವಿಯನ್ನು ಮುಚ್ಚದೇ ಹಾಗೆಯೇ ಬಿಟ್ಟಿದ್ದರು. ಶನಿವಾರ ಸಂಜೆ ಬಾಲಕಿ ಕಾವೇರಿ ಮಾದರ ಆಟವಾಡುತ್ತಾ ಹೋಗಿ ಕೊಳವೆ ಬಾವಿಗೆ ಬಿದ್ದಿದ್ದಾಳೆನ್ನಲಾಗಿದೆ. ಸುಮಾರು 50 ಅಡಿ ಆಳದಲ್ಲಿ ಬಾಲಕಿ ಸಿಲುಕಿದ್ದಾಳೆ ಎಂಬ ಶಂಕೆ ವ್ಯಕ್ತಪಡಿಸಲಾಗಿದ್ದು, ಅಗ್ನಿ ಶಾಮಕದಳದ ಸಿಬ್ಬಂದಿ ಹಾಗೂ ಸ್ಥಳೀಯರಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
Next Story