ವಿದ್ಯಾರ್ಥಿ ನಾಪತ್ತೆ : ಪ್ರಕರಣ ದಾಖಲು
ಅಂಕೋಲಾ, ಮೇ 20: ತಾಲೂಕಿನ ಬಾಸಗೋಡ ಗ್ರಾಮದ ವಿದ್ಯಾರ್ಥಿಯೊರ್ವ ಮನೆಯಿಂದ ಶುಕ್ರವಾರ ಬೆಳಗ್ಗೆ ಮನೆಪಾಠಕ್ಕೆ ಹೋದವನು ವಾಪಸ್ ಮನೆಗೆ ತೆರಳದೇ ನಾಪತ್ತೆಯಾದ ಘಟನೆ ನಡೆದಿದೆ. ವೈಭವ ಲಕ್ಷ್ಮೆಧರ ನಾಯಕ (20) ಎಂಬಾತನೇ ನಾಪತ್ತೆಯಾದ ವಿದ್ಯಾರ್ಥಿಯಾಗಿದ್ದಾನೆ. ಈತನು ಜಿ.ಸಿ. ಕಾಲೇಜಿನ ವಾಣಿಜ್ಯ ಪದವಿ ದ್ವೀತಿಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.
ಈ ಕುರಿತು ವಿದ್ಯಾರ್ಥಿ ತಂದೆ ಲಕ್ಷ್ಮೀಧರ ನಾಯಕ ಪೊಲೀಸ ದೂರು ನೀಡಿದ್ದಾರೆ. ಪಿಎಸ್ಸೈ ವೀಣಾ ಹೊನ್ನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಈ ವಿದ್ಯಾರ್ಥಿ ಸಾರ್ವಜನಿಕರಲ್ಲಿ ಪತ್ತೆಯಾದಲ್ಲಿ ಅಂಕೋಲಾ ಪೊಲೀಸ್ ಠಾಣೆ ದೂ.ಸಂ 08388-230333ಗೆ ಸಂಪರ್ಕಿಸಲು ಎಂದು ವೀಣಾ ಹೊನ್ನೆ ತಿಳಿಸಿದ್ದಾರೆ.
Next Story