ಚಿಕ್ಕಮಗಳೂರು, ಮೇ 20: ಹಿರಿಯ ಕಾಫಿ ಬೆಳೆಗಾರ ಹಿರೇಬೈಲ್ ಬಾಳೆಕೊಂಡೆ ಎಸ್ಟೇಟ್ ಮಾಲಕ ಬಿ.ಎಲ್.ಶ್ರೀನಿವಾಸಗೌಡ (80) ತಮ್ಮ ಸ್ವಗೃಹದಲ್ಲಿ ಶನಿವಾರ ನಿಧನರಾದರು.
ಮೃತರಿಗೆ ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಕಳಸ ಭಾಗದ ಕಲ್ಮನೆ, ಕೂವೆ, ಮಾಳಿಗನಾಡು, ಬಿಳಗಳಿ ರಸ್ತೆಯ ಅಭಿವೃದ್ಧಿಗೆ ಶ್ರಮಿಸಿ ಯಶಸ್ವಿಯಾಗಿದ್ದರು.