ಬಿಸಲಕೊಪ್ಪದಲ್ಲಿ ಬಸ್-ಆ್ಯಂಬುಲೆನ್ಸ್ ಢಿಕ್ಕಿ: ಇಬ್ಬರು ಸ್ಥಳದಲ್ಲೇ ಮೃತ್ಯು
ಶಿರಸಿ, ಮೇ 27: ಖಾಸಗಿ ಬಸ್ ಮತ್ತು ಆ್ಯಂಬ್ಯಲೆನ್ಸ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಆ್ಯಂಬುಲೆನ್ಸ್ ಚಾಲಕ ಮತ್ತು ನಿರ್ವಾಹಕ ಸ್ಥಳದಲ್ಲೇ ಮೃತಪಟ್ಟ ಘಟನೆ ಶಿರಸಿ ಹುಬ್ಬಳ್ಳಿ ರಾಜ್ಯ ಹೆದ್ದಾರಿಯ ಬಿಸಲಕೊಪ್ಪದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಆ್ಯಂಬುಲೆನ್ಸ್ ನಿರ್ವಾಹಕ ಜಗದೀಶ್ ಚನೈಯ್ಯ(20) ಹಾಗೂ ಚಾಲಕ ರಾಮಕೃಷ್ಣ ನಾಯ್ಕ 40 ಮೃತಪಟ್ಟವರಾಗಿದ್ದಾರೆ.
ಘಟನೆಯ ಬಗ್ಗೆ ಶಿರಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story