ಬಂದ್ ಗೆ ಜಯಕರ್ನಾಟಕ ಸಂಘಟನೆ ಬೆಂಬಲವಿಲ್ಲ: ಕೃಷ್ಣ ಹುಲಗಿ
ಶಿಕಾರಿಪುರ, ಜೂ. 11: ಮಹದಾಯಿ ನದಿ ನೀರಿಗಾಗಿ ಬಂದ್ ಕರೆಯನ್ನು ಜಯಕರ್ನಾಟಕ ಸಂಘಟನೆ ಬೆಂಬಲಿಸುವುದಿಲ್ಲ ಎಂದು ಸಂಘಟನೆಯ ತಾಲೂಕು ಅಧ್ಯಕ್ಷ ಕೃಷ್ಣ ಹುಲಗಿ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆಯಲ್ಲಿ ಈ ಬಗ್ಗೆ ತಿಳಿಸಿರುವ ಅವರು ಮಹದಾಯಿ ನದಿ ನೀರಿಗಾಗಿ ವಿವಿಧ ಕನ್ನಡಪರ ಸಂಘಟನೆಗಳು ಸೋಮವಾರ ಕರೆ ನೀಡಿರುವ ರಾಜ್ಯ ಬಂದ್ ಗೆ ಜಯಕರ್ನಾಟಕ ಬೆಂಬಲಿಸುವುದಿಲ್ಲ ಎಂದರು.
ಬಂದ್ ನಿಂದ ಸ್ಥಳೀಯ ಜನಜೀವನ ಅಸ್ತವ್ಯಸ್ಥವಾಗಿ ಸಮಸ್ಯೆ ಹೆಚ್ಚಾಗುವ ಸಾಧ್ಯತೆಯಿದ್ದು ಈ ದಿಸೆಯಲ್ಲಿ ಸಂಘಟನೆ ಬಂದ್ ಕರೆಯನ್ನು ವಿರೋಧಿಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
Next Story