ಸಾಗರ:ಮಾರ್ಗದರ್ಶನ ಶಿಬಿರ
ಸಾಗರ, ಜೂ.23: ಉತ್ತರ ಕನ್ನಡ ಜೆ.ಡಿ.ನಾಯ್ಕ ಅಭಿಮಾನಿ ಬಳಗದ ವತಿಯಿಂದ ಜೂ. 24ರಂದು ಬೆಳಿಗ್ಗೆ 10ರಿಂದ ನೆಹರೂ ಮೈದಾನದ ಬ್ರಾಸಂ ಸಭಾಭವನದಲ್ಲಿ ನಾಗರೀಕ ಸೇವಾಕಾಂಕ್ಷಿಗಳಿಗೆ ಒಂದು ದಿನದ ಬೃಹತ್ ಮಾರ್ಗದರ್ಶನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ಐಎಫ್ಎಸ್ ಅಧಿಕಾರಿಗಳಾದ ದಾಮೋದರ ಎ.ಟಿ., ಗಣಪತಿ ಕೆ., ಡಾ. ತೇಜಸ್ವಿ ನಾಯ್ಕ, ರಾಜೇಶ್ ನಾಯ್ಕ, ಐಆರ್ಎಸ್ ಅಧಿಕಾರಿ ರಾಘವೇಂದ್ರ ರಾಯ್ಕರ್, ಶಿವಮೊಗ್ಗ ಸಹಾಯಕ ಆಯುಕ್ತ ಕೃಷ್ಣಮೂರ್ತಿ ಎಚ್.ಕೆ., ಉಪವಿಭಾಗಾಧಿಕಾರಿ ನಾಗರಾಜ್ ಆರ್. ಸಿಂಗ್ರೇರ್, ಪ್ರಕಾಶ್ ಎನ್., ಅಭಿಮಾನಿ ಬಳಗದ ಅಧ್ಯಕ್ಷ ನಾಗೇಶ್ ದೇವಾಡಿಗ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
ಪಾಲ್ಗೊಳ್ಳಲು ಇಚ್ಚಿಸುವವರು ಗಿರೀಶ್ ಕೋವಿ (9449966565), ಅಶೋಕ ಬೇಳೂರು (ಮೊ. 9901636328), ಧೀರಜ್ ವಿ. ನಾಯ್ಕ (ಮೊ. 9740985953) ಇವರನ್ನು ಸಂಪರ್ಕಿಸಲು ಕೋರಲಾಗಿದೆ.
Next Story