ಪತ್ರಿಕಾರಂಗ ಉದ್ಯಮಿಗಳ ಕಪಿಮುಷ್ಟಿಯಲ್ಲಿ ಸಿಲುಕಿರುವುದು ವಿಪರ್ಯಾಸ: ಎನ್.ರಾಜು
ಕಡೂರು ಜು. 21: ಇತರೆ ಕ್ಷೇತ್ರಗಳ ಜೊತೆ ಪತ್ರಿಕಾರಂಗವೂ ಉದ್ಯಮಿಗಳ ಕಪಿ ಮುಷ್ಟಿಯಲ್ಲಿ ಸಿಲುಕಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಕಾರ್ಯನಿರತ ಪರ್ತಕರ್ತರ ಸಂಘದ ರಾಜ್ಯಾಧ್ಯಕ್ಷ ಎನ್. ರಾಜು ಹೇಳಿದರು.
ಅವರು ಶುಕ್ರವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪತ್ರಕರ್ತರ ದಿನಾಚರಣೆ ಉದ್ಟಾಟಿಸಿ ಮಾತನಾಡಿದರು. ಕಲೆ, ಶೈಕ್ಷಣಿಕ, ಕ್ರೀಡೆ, ಆರೋಗ್ಯ, ರಾಜಕೀಯ ಕ್ಷೇತ್ರಗಳೂ ಇಂದು ಉದ್ಯಮಗಳಾಗಿವೆ. ಯಾವುದೇ ಕ್ಷೇತ್ರದಲ್ಲೂ ಭದ್ರತೆ ಮತ್ತು ಬದ್ದತೆ ಇಲ್ಲವಾಗಿದೆ. ಪತ್ರಕರ್ತರನ್ನು ಉಪಯೋಗಿಸಿಕೊಳ್ಳುವ ರಾಜಕಾರಣಿಗಳು ಇಂದು ಹೆಚ್ಚಾಗಿದ್ದಾರೆ. ಪತ್ರಕರ್ತರನ್ನು ಕೇವಲ ಕಿರಿಬೇವಿನ ಸೊಪ್ಪಿನ ರೀತಿ ಉಪಯೋಗಿಸಿಕೊಂಡು ತಮ್ಮ ಕೆಲಸವಾದ ಮೇಲೆ ಪಕ್ಕಕ್ಕೆ ಸರಿಸುವವರೇ ಹೆಚ್ಚಾಗಿದ್ದಾರೆ ಎಂದರು.
ಪತ್ರಕರ್ತರ ಸಮಸ್ಯೆಯ ಬಗ್ಗೆ ಯಾವ ರಾಜಕಾರಣಿಗಳು ಸಹ ಸದನದಲ್ಲಿ ಮಾತನಾಡುವುದಿಲ್ಲ. ಸರ್ಕಾರದಿಂದ ಯಾವುದೇ ಸವಲತ್ತು ಪತ್ರಕರ್ತರಿಗೆ ದೊರಕುತ್ತಿಲ್ಲ. ಕಷ್ಟ ಕಾರ್ಪಾಣ್ಯಕ್ಕೆ ಸಂಘದ ಅವಶ್ಯಕತೆಯಿದೆ. ಸಂಘಟನೆ ಎಂದರೆ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಮಾತ್ರ ಎಂದರು.
ಜಿಪಂ ಮಾಜಿ ಅಧ್ಯಕ್ಷ ಬೆಳ್ಳಿಪ್ರಕಾಶ್ ಮಾತನಾಡಿ, ಜನರ ಕಣ್ಣನ್ನು ತೆರೆಸುವಲ್ಲಿ ಪತ್ರಿಕೆಯವರು ಕಾರಣರಾಗುತ್ತಾರೆ. ಪತ್ರಿಕೆಯನ್ನು ಮನೆಗಳಿಗೆ ತೆಗೆದುಕೊಳ್ಲುವ ಮೂಲಕ ಪತ್ರಿಕೆಗಳಿಗೆ ಪ್ರೋತ್ಸಾಹ ನೀಡಬೇಕು. ಆಗ ಪತ್ರಿಕೆ ಬೆಳವಣಿಗೆ ಸಾಧ್ಯ. ಒಳ್ಳೆಯ ದಿನಗಳನ್ನು ನಿರ್ಮಾಣ ಮಾಡುವ ಕಾರ್ಯವನ್ನು ಪತ್ರಕರ್ತರು ಮಾಡಬೇಕು. ದಿನ ಕಳೆದಂತೆ ದೇಶದಲ್ಲಿ ಮತ್ತು ರಾಜ್ಯದಲ್ಲಿ ಚಿತ್ರಣಗಳು ಬದಲಾವಣೆಗಳು ಆಗುತ್ತಿವೆ. ಮುಂಬರುವ ಚುನಾವಣೆಯ ಮಹಾ ಕದನದ ನಿಜ ಸ್ಥಿತಿಯನ್ನು ಜನಸಾಮಾನ್ಯರಿಗೆ ವಸ್ತು ಸ್ಥಿತಿಯನ್ನು ತಿಳಿಸುವ ಕೆಲಸವನ್ನು ಪರ್ತಕರ್ತರು ಮಾಡಬೇಕು ಎಂದು ಮನವಿ ಮಾಡಿದರು.
ಜಿಪಂ ಮಾಜಿ ಅಧ್ಯಕ್ಷ ಕೆ.ಎಂ. ಕೆಂಪರಾಜು,ಜಿಪಂ ಸದಸ್ಯ ಕೆ.ಆರ್. ಮಹೇಶ್ ಒಡೆಯರ್ ಮಾತನಾಡಿದರು.ಕಾರ್ಯಕ್ರಮದಲ್ಲಿ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೀರೇಶ್ಮೂರ್ತಿ ವಹಿಸಿದ್ದರು. ಪ್ರಾಸ್ತಾವಿಕವಾಗಿ ಕೆ.ವಿನಯ್ಕುಮಾರ್ ಮಾತನಾಡಿದರು. ಬೀರೂರು ಪುರಸಭೆ ಅಧ್ಯಕ್ಷೆ ಸವಿತಾರಮೇಶ್, ಜಿಪಂ ಸದಸ್ಯ ಶರತ್ ಕೃಷ್ಣಮೂರ್ತಿ, ತಾಪಂ ಅಧ್ಯಕ್ಷೆ ರೇಣುಕಾ ಉಮೇಶ್, ಟಿ.ಆರ್. ಲಕ್ಕಪ್ಪ, ತಾಲೂಕು ಸಂಘದ ಗೌರವಾಧ್ಯಕ್ಷ ಟಿ.ಎನ್.ಎ. ಮೊದಲಿಯಾರ್,