ಗೃಹಖಾತೆ ನಿಭಾಯಿಸಲು ಸಿದ್ಧ: ರಮಾನಾಥ ರೈ
ಬೆಂಗಳೂರು, ಜು.26: "ಮುಖ್ಯಮಂತ್ರಿಗಳು ನನ್ನ ಮೇಲೆ ಭರವಸೆ ಇಟ್ಟು ಗೃಹ ಖಾತೆ ಬಗ್ಗೆ ನನ್ನ ಜೊತೆ ಚರ್ಚಿಸಿದ್ದು ನಿಜ. ಈಗಾಗಲೇ ಹಲವು ಖಾತೆ ನಿಭಾಯಿಸಿದ ಅನುಭವ ನನಗಿದೆ. ಗೃಹ ಖಾತೆ ನೀಡಿದರೆ ಸಮರ್ಥವಾಗಿ ನಿರ್ವಹಿಸಲು ನಾನು ಸಿದ್ಧನಿದ್ದೇನೆ'' ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.
ಕಾಂಗ್ರೆಸ್ನ ಹಿರಿಯ ಮುಖಂಡ ರೈ ಅರಣ್ಯ ಖಾತೆಯ ಬದಲಿಗೆ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ರಿಂದ ತೆರವಾಗಿರುವ ಗೃಹ ಖಾತೆಯನ್ನು ನಿಭಾಯಿಸುವಂತೆ ಸಿಎಂ ಸೂಚಿಸಿದ್ದರು ಎಂದು ವರದಿಯಾಗಿತ್ತು.
"ದಕ್ಷಿಣ ಕನ್ನಡ ಜಿಲ್ಲೆಯ ಗಲಭೆ ವಿಚಾರವಾಗಿ ಬಿಜೆಪಿಯವರು ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದರು. ಸುಳ್ಳನ್ನು ಪದೇ ಪದೇ ಹೇಳುವುದು ಬಿಜೆಪಿಯ ಜಾಯಮಾನ'' ಎಂದು ರೈ ಹೇಳಿದ್ದಾರೆ.
Next Story