ಮೃತ ದೇಹ ಪತ್ತೆ: ಕೊಲೆ ಶಂಕೆ
ದಾವಣಗೆರೆ, ಜು.28: ಹರಿಹರ ತಾಲ್ಲೂಕಿನ ರಾಜನಹಳ್ಳಿ ಜಾಕವೆಲ್ ಕಾಲುವೆ ಬಳಿ ಕೊಲೆಯಾದ ವ್ಯಕ್ತಿಯೊಬ್ಬನ ಮೃತ ದೇಹ ಪತ್ತೆಯಾಗಿದೆ. ಅಜಾದ್ ನಗರದ ನಿವಾಸಿ ಸೈಯದ್ ರಹಮತ್ (24) ಸಾವನ್ನಪ್ಪಿರುವ ಯುವಕ.
ಅನ್ನಭಾಗ್ಯ ಅಕ್ಕಿ ಮಾಫಿಯಾಕ್ಕೆ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ ಎನ್ನಲಾಗಿದೆ. ಕಳೆದ ಎರಡು ದಿನಗಳಿಂದ ಸೈಯದ್ ನಾಪತ್ತೆ ಆಗಿದ್ದ. ಜುಲೈ 21 ರಂದು ಪೊಲೀಸ್ ರೇಡ್ ಆಗಿತ್ತು.
ಅಕ್ರಮ ಅಕ್ಕಿ ಮಾರುತ್ತಿರುವ ವ್ಯಕ್ತಿಗಳ ಬಗ್ಗೆ ಸೈಯದ್ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಕೊಲೆ ಆಗಿರುವ ಶಂಕೆ ಇದೆ ಎನ್ನಲಾಗಿದೆ. ನಾಲ್ಕು ಜನ ಯುವಕರಿಂದ ಕೊಲೆ ನಡೆದಿದೆ ಎಂದು ಸೈಯದ್ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಹರಿಹರ ಗ್ರಾಮೀಣ ಪೊಲಿೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ
Next Story