ವ್ಯಕ್ತಿ ಕಾಣೆ; ದೂರು ದಾಖಲು
ಭಟ್ಕಳ, ಜು.28: ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂದು ಮನೆಯಿಂದ ಹೊರಕ್ಕೆ ಹೋಗಿದ್ದ ವ್ಯಕ್ತಿಯೋರ್ವ ಕಾಣೆಯಾಗಿರುವ ಕುರಿತು ಇಲ್ಲಿನ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಾಡುವಳ್ಳಿಯ ಬಡೇಬಾಗಿಲುವಿನ ಲಿಂಗು ಮಾಗ್ತು ಮರಾಠಿ (62) ಎನ್ನುವವರೇ ನಾಪತ್ತೆಯಾದವರಾಗಿದ್ದು, ಆತನ ಪುತ್ರ ಪುರ್ಸು ಮರಾಠಿ ದೂರು ನೀಡಿದ್ದಾರೆ. ದೂರಿನಲ್ಲಿ ಜು.23ರಂದು ಮನೆಯಿಂದ ವೆಂಕಟಾಪುರದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ಮದ್ಯಾಹ್ನದ ತನಕ ದೇವಸ್ಥಾನದಲ್ಲಿ ಇರುವುದಾಗಿ ತಿಳಿದು ಬಂದಿದ್ದು, ಇನ್ನೂ ಮನೆಗೆ ವಾಪಾಸು ಬಂದಿಲ್ಲ. ಯಾರಾದರೂ ಇವರನ್ನು ಕಂಡರೆ ತಕ್ಷಣ ಮುರ್ಡೇಶ್ವರ ಪೊಲೀಸ್ಠಾಣೆ (08385-268896) ದೂರವಾಣಿಗೆಕರೆ ಮಾಡಿ ತಿಳಿಸುವಂತೆ ಕೋರಲಾಗಿದೆ.
Next Story