ಬೈಕ್ ಢಿಕ್ಕಿ; ಹಿಂಬದಿ ಸವಾರ ಸಾವು
ಕುಶಾಲನಗರ, ಆ.11: ನಾಯಿಯೊಂದು ಚಲಿಸುತ್ತಿದ್ದ ಬೈಕಿಗೆ ಅಢ್ಡ ಸಿಲುಕಿ ಅಪಘಾತ ಸಂಭವಿಸಿದ ಹಿನ್ನೆಲೆ ಮಹಿಳೆಯೊಬ್ಬಳು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಇಲ್ಲಿಗೆ ಸಮೀಪದ ಕೂಡಿಗೆಯ ಚರ್ಚ ಬಳಿ ನಡೆದಿದೆ.
ಸರೋಜಮ್ಮ 48 ಮೃತ್ತಪಟ್ಟ ಮಹಿಳೆ. ಹುಣಸೂರಿನ ಕೊಳವೆ ಗ್ರಾಮದ ನಿವಾಸಿ ಸ್ವಾಮಿಶೆಟ್ಟರ ಪತ್ನಿಯಾದ ಇವರು ಬೈಕ್ ನಲ್ಲಿ ತಮ್ಮ ಮಗನಾದ ಮಂಜುನಾಥ ಜೊತೆ ಹಾಸನದಿಂದ ತಮ್ಮ ಮನೆಗೆ ಹಿಂದಿರುಗುವ ವೇಳೆ ಅಪಘಾತ ಸಂಭವಿಸಿದೆ.
ಮೃತ್ತ ಸರೋಜಮ್ಮನವರ ಮಗನಾದ ಮಂಜುನಾಥ್ ರವರು ಕಾಲಿಗೆ ಪೆಟ್ಟು ಬಿದ್ದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಕುಶಾಲನಗರದ ಸಂಚಾರಿ ಠಾಣಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Next Story