ಹೆಬ್ಬಾವು ಹಿಡಿದು ಕಾಡಿಗೆ ಬಿಟ್ಟ ಸ್ನೇಕ್ ಮಹೇಶ್
ಯಳಂದೂರು, ಆ 12: ತಾಲ್ಲೂಕಿನ ದಾಸನಹುಂಡಿ ಗ್ರಾಮದ ರವಿಬಾಬುರವರ ದಾಳಿಂಬೆ ತೋಟದಲ್ಲಿ ಬುಧವಾರ ಕಾಣಿಸಿಕೊಂಡ ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಡುವಂತೆ ತೊಟದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ, ಶ್ರೀನಿವಾಸಬಾಬುರವರು ತಕ್ಷಣ ಸಂತೇಮರಹಳ್ಳಿಯ ಸ್ನೇಕ್ ಮಹೇಶ್ರವರಿಗೆ ವಿಷಯ ತಿಳಿಸಿ ಮನವಿ ಮಾಡಿದ್ದಾರೆ.
ತಕ್ಷಣ ಸ್ಥಳಕ್ಕಾಗಮಿಸಿದ ಸ್ನೇಕ್ ಮಹೇಶ್ ತಮ್ಮ ಸಹದ್ಯೋಗಿ ಸ್ನೇಕ್ ಕೆಂಪರಾಜುರವರ ಜೊತೆಗೂಡಿ ಹೆಬ್ಬಾವನ್ನು ಹಿಡಿದು ಅರಣ್ಯ ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ಬಿಳಿಗಿರಿರಮಗನ ಬೆಟ್ಟದ ಕಾಡಿಗೆ ಬಿಟ್ಟಿದ್ದಾರೆ.
Next Story