ಎತ್ತಿನ ಬಂಡಿಗೆ ಕಾರು ಢಿಕ್ಕಿ: ಎತ್ತು ಸಾವು, ಇಬ್ಬರಿಗೆ ಗಂಭೀರ ಗಾಯ
ರಾಯಚೂರು, ಆ.12: ಎತ್ತಿನ ಬಂಡಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಎತ್ತು ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿ ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದೆ.
ರಾಯಚೂರಿನಿಂದ ಮಾನ್ವಿಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿಎದುರಿನಿಂದ ಬರುತ್ತಿದ್ದ ಎತ್ತಿನ ಬಂಡಿಗೆ ಢಿಕ್ಕಿ ಹೊಡೆದಿದೆ. ಕಾರಿನ ವೇಗಕ್ಕೆ ಬಂಡಿ ಸಮೇತ ನೂರಾರು ಅಡಿ ದೂರದವರೆಗೆ ಎಳೆದುಕೊಂಡು ಬಂದು, ರಸ್ತೆ ಬದಿಯಲ್ಲಿದ್ದ ಹೊಟೇಲ್ಗೆ ವಾಹನ ನುಗ್ಗಿದ್ದರಿಂದ ಹೊಟೇಲ್ ಜಖಂಗೊಂಡಿದೆ.
ಸ್ಥಳದಲ್ಲೇ ಒಂದು ಎತ್ತು ಮೃತಪಟ್ಟಿದೆ. ವಾಹನ ಚಾಲಕ ಹಾಗೂ ಬಂಡಿಯಲ್ಲಿದ್ದ ರೈತ ಗಂಭೀರವಾಗಿ ಗಾಯಗೊಂಡಿದ್ದು, ಇವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನದಲ್ಲಿದ್ದ ಇತರೇ ಮೂರುಜನ ಮಹಿಳೆಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
Next Story