ಬಿಜಾಪುರ, ಆ.18: ಆಲಮಟ್ಟಿ ಜಲಾಶಯ ಗರಿಷ್ಠ ಮಟ್ಟ ತಲುಪಿದ್ದು, ರಾಜ್ಯದ ಜೀವನದಿಗಳಲ್ಲಿ ಒಂದಾಗಿರುವ ತುಂಬಿ ಹರಿಯುತ್ತಿರುವ ಕೃಷ್ಣಾ ನದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬಾಗಿನ ಸಮರ್ಪಿಸಿದರು. ಕೃಷ್ಣಾ ನದಿಗೆ ಗಂಗಾ ಪೂಜೆ ನೆರವೇರಿಸಿದ ಮುಖ್ಯಮಂತ್ರಿಯವರು ಬಾಗಿನ ಸಮರ್ಪಿಸಿದರು.