ಸಾಲದ ಬಾಧೆ: ರೈತ ಆತ್ಮಹತ್ಯೆ
ಚಿಕ್ಕಮಗಳೂರು, ಆ.21: ಸಾಲದ ಬಾಧೆಯಿಂದ ರೈತರೋರ್ವರು ವಿದ್ಯುತ್ ತಂತಿಯನ್ನು ಹಿಡಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡೂರು ತಾಲೂಕಿನ ಕನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ರೈತನನ್ನು ಗಂಗಾಧರಪ್ಪ(55) ಎಂದು ಗುರುತಿಸಲಾಗಿದೆ. ಈತ ತನ್ನ ಜಮೀನು ಅಭಿವೃದ್ಧಿಗಾಗಿ ವಿವಿಧೆಡೆ ಸಾಲದ ರೂಪದಲ್ಲಿ ಹಣ ಪಡೆದುಕೊಂಡಿದ್ದರು. ಅಲ್ಲದೆ ಜಮೀನಿಗೆ ನೀರಾವರಿಗಾಗಿ 3 ಬೋರ್ವೆಲ್ ಕೊರೆಸಿದ್ದರು. ಆದರೆ ಅದು ವಿಫಲವಾಗಿದ್ದು, ನೀರು ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಗಂಗಾಧರಪ್ಪ ತೀವ್ರ ನೊಂದುಕೊಂಡಿದ್ದರು.
ಈ ಬಾರಿಯೂ ಸರಿಯಾಗಿ ವಾಡಿಕೆಯಂತೆ ಮಳೆಯಾಗದಿರುವ ಹಿನ್ನೆಲೆಯಲ್ಲಿ ಮುಂದಿನ ಬದುಕಿಗೆ ದಾರಿ ಹೇಗೆ ಎಂದು ಚಿಂತಿಸಿ ಜಮೀನಿಗೆ ತೆರಳಿ ವಿದ್ಯುತ್ ತಂತಿಯನ್ನು ಹಿಡಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತನ ಪತ್ನಿ ಶ್ರೀಮತಿ ಲಲಿತಮ್ಮ ಕಡೂರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
Next Story