ಹನೂರು: ಹಾಲು ಒಕ್ಕೂಟದ ಕೇಂದ್ರದಲ್ಲಿ ಸರ್ವ ಸದಸ್ಯರ ಸಭೆ
ಹನೂರು, ಸೆ.25: ಬಿಎಂಸಿ ಕೇಂದ್ರವು ಉತ್ತಮ ಸಹಕಾರ ಸಂಘವಾಗಿ ಪ್ರಶಸ್ತಿ ಪಡೆದುಕೊಂಡಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ರಾಮು ಅಭಿನಂದಿಸಿದ್ದಾರೆ.
ಚಾಮರಾಜನಗರ ಜಿಲ್ಲೆ ಕುದೇರು ನೂತನ ಹಾಲು ಒಕ್ಕೂಟದ ಕೇಂದ್ರದಲ್ಲಿ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು,
ತಾಲೂಕಿನ ಹನೂರು ಹಾಲು ಉತ್ಪಾದಕರ ಸಹಕಾರ ಸಂಘದ ಬಿಎಂಸಿ ಕೇಂದ್ರ ಎಲ್ಲಾ ವಿಧದಲ್ಲಿಯೂ ಉತ್ತಮವಾಗಿ ಸಂಘ ರೈತರಿಂದ ಹಾಲು ಸಂಗ್ರಹಿಸಿ ಒಕ್ಕೂಟಕ್ಕೆ ಸರಬರಾಜು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಚಾಮಲ್ನ ಹಾಲು ಒಕ್ಕೂಟದ ಅಧ್ಯಕ್ಷ ಗುರುಮಲ್ಲಪ್ಪ ಮಾತನಾಡಿ, ಹಾಲು ಒಕ್ಕೂಟದ ಸಹಕಾರ ಸಂಘಗಳು ಹಾಲು ಪೂರೈಕೆ ಮಾಡು ರೈತರಿಗೆ ಗುಣಮಟ್ಟದ ಹಾಲು ಪೂರೈಕೆ ಮಾಡುವಂತೆ ಸಹಕಾರ ಸಂಘಗಳಲ್ಲಿ ಸಲಹೆ ಸೂಚನೆಗಳ ಮೇರೆಗೆ ಸಭೆಗಳನ್ನು ನಡೆಸಿ ಹಾಲು ಪೂರೈಕೆ ಎಂದು ತಿಳಿಸಿದರು.
Next Story