ಕಾರು ಕೆರೆಗೆ ಬಿದ್ದು ಮೂವರು ಸಾವು
ಬೆಂಗಳೂರು, ಅ.18: ರಾಮನಗರ ಜಿಲ್ಲೆಯ ಮನಗಾನಹಳ್ಳಿಯಲ್ಲಿ ಕೆರೆಗೆ ಕಾರೊಂದು ಬುಧವಾರ ಉರುಳಿ ಬಿದ್ದು ಮೂವರು ಮೃತಪಟ್ಟಿದ್ದಾರೆ.
ಕಾರಿನಲ್ಲಿದ್ದ ಚಾಲಕ ಚಿದಾನಂದ(24), , ಶಶಾಂಕ(6), ಇಂಪನಾ(4) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬಾಲಕ ದಿಲೀಪ್ ಎಂಬಾತನ್ನು ಈಜಿ ದಡ ಸೇರಿದ್ದಾನೆ.
ಮೃತಪಟ್ಟ ಮೂವರು ಕನಕಪುರದ ಗೊಟ್ಟಿಗೆಹಳ್ಳಿ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ.
ಕಾರಿನಲ್ಲಿ ಒಟ್ಟು ನಾಲ್ವರು ಪ್ರಯಾಣಿಸುತ್ತಿದ್ದರು. ಕೆರೆಗೆ ಕಾರು ಬಿದ್ದಾಗ ನೀರಿನಲ್ಲಿ ಮುಳುಗಿದ್ದ ಮೂವರನ್ನು ನೀರಿನಿಂದ ಮೇಲೆಕ್ಕೆತ್ತಿ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಿದರೂ ಫಲಕಾರಿಯಾಗಲಿಲ್ಲ ತಿಳಿದು ಬಂದಿದೆ.
ಬಿಡದಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story