ದಿಲ್ಲಿ ಕ್ವಾರ್ಟರ್ ಫೈನಲ್ ಗೆ
ಹೊಸದಿಲ್ಲಿ, ನ.19: ನವ್ದೀಪ್ ಸೈನಿ ಹಾಗೂ ವಿಕಾಸ್ ಮಿಶ್ರಾರ ಪ್ರಯತ್ನದ ಫಲವಾಗಿ ಮಹಾರಾಷ್ಟ್ರವನ್ನು ಇನಿಂಗ್ಸ್ ಹಾಗೂ 61 ರನ್ ನಿಂದ ಮಗುಚಿ ಹಾಕಿದ ದಿಲ್ಲಿ ತಂಡ ರಣಜಿ ಟ್ರೋಫಿ ‘ಎ’ ಗುಂಪಿನಿಂದ ಕ್ವಾರ್ಟರ್ಫೈನಲ್ಗೆ ಲಗ್ಗೆ ಇಟ್ಟಿದೆ. ಐದು ಪಂದ್ಯಗಳಲ್ಲಿ 24 ಅಂಕ ಗಳಿಸಿರುವ ದಿಲ್ಲಿ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಹೈದರಾಬಾದ್ನ್ನು ಎದುರಿಸಲಿದೆ. ಕರ್ನಾಟಕ(4 ಪಂದ್ಯ, 23 ಅಂಕ) ‘ಎ’ ಗುಂಪಿನಿಂದ ಕ್ವಾರ್ಟರ್ಫೈನಲ್ ತಲುಪಲು ಸಜ್ಜಾಗಿದೆ.
ದಿಲ್ಲಿಯ ಮೊದಲ ಇನಿಂಗ್ಸ್ 419 ರನ್ಗೆ ಉತ್ತರವಾಗಿ ಮಹಾರಾಷ್ಟ್ರ ಮೊದಲ, ಎರಡನೆ ಇನಿಂಗ್ಸ್ನಲ್ಲಿ ಕ್ರಮವಾಗಿ 99 ಹಾಗೂ 259 ರನ್ ಗಳಿಸಿ ಆಲೌಟಾಯಿತು. ಸೈನಿ(4-57) ಹಾಗೂ ವಿಕಾಸ್(4-90)ಮಹಾರಾಷ್ಟ್ರಕ್ಕೆ ಕಡಿವಾಣ ಹಾಕಿದರು. ನಾಯಕ ಇಶಾಂತ್ ಶರ್ಮ 33ಕ್ಕೆ 2 ವಿಕೆಟ್ ಉಡಾಯಿಸಿದರು.
►ಬಂಗಾಳ, ಸರ್ವಿಸಸ್ಗೆ ಭಾರೀ ಜಯ
ಬಂಗಾಳ ಹಾಗೂ ಸರ್ವಿಸಸ್ ತಂಡಗಳು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ 3ನೆ ದಿನವಾದ ರವಿವಾರ ಇನಿಂಗ್ಸ್ ಅಂತರದ ಜಯ ದಾಖಲಿಸಿವೆ.
ಬಂಗಾಳ ತಂಡ ಇಶಾನ್ ಪೊರೆಲ್ 5 ವಿಕೆಟ್ ಗೊಂಚಲು ನೆರವಿನಿಂದ ಪಂಜಾಬ್ನ್ನು 2ನೆ ಇನಿಂಗ್ಸ್ನಲ್ಲಿ 213 ರನ್ಗೆ ಕಟ್ಟಿ ಹಾಕಿತು. ದ್ವಿವೇಶ್ ಪಥಾನಿಯ ಛತ್ತೀಸ್ಗಡ ವಿರುದ್ಧ 7 ವಿಕೆಟ್ಗಳನ್ನು ಕಬಳಿಸುವ ಮೂಲಕ ಸರ್ವಿಸಸ್ಗೆ ಇನಿಂಗ್ಸ್ ಹಾಗೂ 9 ರನ್ಗಳ ಅಂತರದ ಜಯ ತಂದರು. ಛತ್ತೀಸ್ಗಡ 2ನೆ ಇನಿಂಗ್ಸ್ನಲ್ಲಿ 133 ರನ್ಗೆ ಆಲೌಟಾಯಿತು.