ಧೋನಿ, ಕೊಹ್ಲಿಗೆ ಆಭಾರಿ: ಕುಲ್ದೀಪ್
ಹೊಸದಿಲ್ಲಿ, ಫೆ.2: ‘‘ಭಾರತ ತಂಡದಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ನಾಯಕ ಎಂಎಸ್ ಧೋನಿ ಅವರಂತಹ ಇಬ್ಬರು ದಂತಕತೆೆಗಳಿದ್ದು, ಅವರಿಗೆ ತಾನು ಆಭಾರಿಯಾಗಿದ್ದೇನೆ’’ ಎಂದು ಎಡಗೈ ಸ್ಪಿನ್ನರ್ ಕುಲ್ದೀಪ್ ಯಾದವ್ ಹೇಳಿದ್ದಾರೆ.
ಯಾದವ್ ದಕ್ಷಿಣ ಆಫ್ರಿಕ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದ ಯಶಸ್ಸನ್ನು ಮಹೇಂದ್ರ ಸಿಂಗ್ ಧೋನಿ ಹಾಗೂ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಅರ್ಪಿಸಿದರು.
ಯಾದವ್ 10 ಓವರ್ಗಳಲ್ಲಿ 34 ರನ್ ನೀಡಿ ಪ್ರಮುಖ 3 ವಿಕೆಟ್ಗಳನ್ನು ಬಾಚಿಕೊಂಡಿದ್ದರು. ಯಾದವ್ ದಕ್ಷಿಣ ಆಫ್ರಿಕದ ಡುಮಿನಿ, ಡೇವಿಡ್ ಮಿಲ್ಲರ್ ಮತ್ತು ಕ್ರಿಸ್ ಮೋರಿಸ್ ವಿಕೆಟ್ಗಳನ್ನು ಪಡೆದಿದ್ದರು. ‘‘ದಕ್ಷಿಣ ಆಫ್ರಿಕದಲ್ಲಿ ತಾನು ಮೊದಲ ಬಾರಿ ಆಡುತ್ತಿದ್ದ ಕಾರಣ ಆಫ್ರಿಕನ್ನರಿಗೆ ಬೌಲಿಂಗ್ ಮಾಡುವಾಗ ಗೊಂದಲದಲ್ಲಿದ್ದೆ. ತಾನು ಗೊಂದಲದಲ್ಲಿದ್ದಾಗ ಧೋನಿ ನನ್ನ ನೆರವಿಗೆ ಬಂದರು. ‘ನಿನ್ನ ಇಷ್ಟದಂತೆ ಬೌಲಿಂಗ್ ಮಾಡು’ ಎಂದು ತನಗೆ ಸಲಹೆ ನೀಡಿದ್ದರು’’ ಎಂದರು.
Next Story