ಚೆಂಡು ವಿರೂಪ ಪ್ರಕರಣ ಎಚ್ಚರಿಕೆ ಗಂಟೆ: ಕಾಲಿಸ್
ಕೋಲ್ಕತಾ,ಎ.1: ‘‘ಆಸ್ಟ್ರೇಲಿಯ ಆಟಗಾರರು ಭಾಗಿಯಾಗಿರುವ ಚೆಂಡು ವಿರೂಪ ಪ್ರಕರಣ ವಿಶ್ವದೆಲ್ಲೆಡೆಯ ಕ್ರಿಕೆಟಿಗರಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ. ಇದೀಗ ಪ್ರತಿಯೊಬ್ಬರು ಗೆರೆ ದಾಟುವ ಮೊದಲು ಯೋಚಿಸಬೇಕಾಗಿದೆ’’ ಎಂದು ದಕ್ಷಿಣ ಆಫ್ರಿಕ ಆಲ್ರೌಂಡರ್ ದಂತಕತೆ ಜಾಕ್ ಕಾಲಿಸ್ ಹೇಳಿದ್ದಾರೆ. ‘‘ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿ ಸಾಕಷ್ಟು ಚರ್ಚೆ ನಡೆದಿದೆ. ಈ ಘಟನೆಯು ಅಂತಾರಾಷ್ಟ್ರೀಯ ಕ್ರಿಕೆಟ್ನ ಎಲ್ಲ ಆಟಗಾರರಿಗೆ ಒಂದು ಎಚ್ಚರಿಕೆಯ ಸಂದೇಶವಾಗಿದೆ. ನಾವು ಕ್ರೀಡಾಸ್ಫೂರ್ತಿಯಿಂದ ಆಡುವ ಅಗತ್ಯವಿದೆ ಎನ್ನುವುದು ಈ ಘಟನೆಯಿಂದ ಸಾಬೀತಾಗಿದೆ’’ ಎಂದು ಕೋಲ್ಕತಾ ಜೆರ್ಸಿಯ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಾಲಿಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
Next Story