ನೀವೇಕೆ ನಗುತ್ತಿದ್ದೀರಿ ? ಅ್ಯಂಕರ್ ವಿರುದ್ಧ ಅಬ್ಬರಿಸಿದ ಅಖ್ತರ್
ಟ್ವೆಂಟಿ-20 ವಿಶ್ವಕಪ್: ಭಾರತದ ವಿರುದ್ಧ ಪಾಕ್ ಗೆ ಸೋಲು
ಕೋಲ್ಕತಾ, ಮಾ.20: ಪಾಕಿಸ್ತಾನ ಕ್ರಿಕೆಟ್ ತಂಡ ಶನಿವಾರ ರಾತ್ರಿ ನಡೆದ ಟ್ವೆಂಟಿ-20 ವಿಶ್ವಕಪ್ ಪಂದ್ಯದಲ್ಲಿ ಭಾರತ ವಿರುದ್ಧ ಸೋಲಿನ ಹಿನ್ನೆಲೆಯಲ್ಲಿ ಆಘಾತಗೊಂಡ ಒಂದಡೆಯಾದರೆ ಪಂದ್ಯದ ಬಳಿಕ ನಡೆದ ಕಾರ್ಯಕ್ರಮದ ವೇಳೆ ಟಿವಿ ಅ್ಯಂಕರ್ ಅಪಹಾಸ್ಯ ಮಾಡಿದಕ್ಕಾಗಿ ಪಾಕಿಸ್ತಾನದ ಮಾಜಿ ವೇಗಿ ಶುಐಬ್ ಅಖ್ತರ್ ತಾಳ್ಮೆ ಕಳೆದುಕೊಂಡು "ನೀವೇಕೆ ನಗುತ್ತಿದ್ದಿರಿ ?” ಎಂದು ಸಿಟ್ಟಿನಿಂದ ಅಬ್ಬರಿಸಿದ ಘಟನೆ ನಡೆಯಿತು.
ಶುಐಬ್ ಅಕ್ತರ್ ಅವರನ್ನು ಕಪಿಲ್ ದೇವ್ ಸಮಧಾನ ಪಡಿಸಿದರು. ವಿಶ್ವ ಟ್ವೆಂಟಿ- 20 ಅಧಿಕೃತ ಪ್ರಸಾರಕ ಪ್ರಸಾರ ಸ್ಟಾರ್ ಸ್ಪೋರ್ಟ್ಸ್ನ ಕಾರ್ಯಕ್ರಮ " ಮೌಖ ಮೌಖ’ದಲ್ಲಿ ಶನಿವಾರ ಕ್ರಿಕೆಟ್ ಪಂದ್ಯ ಮುಗಿದ ಬಳಿಕ ಅ್ಯಂಕರ್ ತನ್ನನ್ನು ಅಪಹಾಸ್ಯ ಮಾಡಿದರೆಂದು ಕೋಪಗೊಂಡ ಅಖ್ತರ್ ". ನಾನು ಆಟದ ವಿಶ್ಲೇಷಣೆ ಮಾಡಲು ಇಲ್ಲಿ ಬಂದವನು , ಗೇಲಿ ಮಾಡಬೇಡಿ" ಎಂದು ಸಿಟ್ಟಿನಿಂದ ನುಡಿದರು. ಸ್ಟುಡಿಯೋದಲ್ಲಿದ್ದ ಭಾರತ ಕ್ರಿಕೆಟ್ ತಂಡದ ಮಜಿ ನಾಯಕ ಕಪಿಲ್ ದೇವ್ ಅವರು ಶುಐಬ್ ಅಕ್ತರ್ ತಾಳ್ಮೆ ಕಳೆದುಕೊಂಡಿದ್ದಾರೆ. ಅವರು ಶಾಂತರಾಗಲು ಅವಕಾಶ ನೀಡಿ ಎಂದರು.