ಬಾಕ್ಸರ್ ವಿಕಾಸ್ ಕೃಷ್ಣಗೆ ಕಂಚು
ಜಕಾರ್ತ, ಆ.31: ಭಾರತದ ಬಾಕ್ಸರ್ ವಿಕಾಸ್ ಕೃಷ್ಣ 75 ಕೆ.ಜಿ. ವಿಭಾಗದಲ್ಲಿ ಸೆಮಿಫೈನಲ್ ತಲುಪಿದ್ದರೂ, ಗಾಯವಾಗಿರುವ ಹಿನ್ನೆಲೆಯಲ್ಲಿ ಕಣದಿಂದ ದೂರ ಸರಿದ್ದಾರೆ. ಇದರಿಂದಾಗಿ ಅವರು ಕಂಚಿನ ಪದಕಕ್ಕೆ ತೃಪ್ತರಾದರು.
ಎಡಕಣ್ಣಿನ ರೆಪ್ಪೆಗೆ ಗಾಯವಾಗಿರುವ ಹಿನ್ನೆಲೆಯಲ್ಲಿ ವಿಕಾಸ್ ಕೃಷ್ಣ ಸೆಮಿಫೈನಲ್ ನಲ್ಲಿ ಸೆಣಸಾಡಲು ಅಸಮರ್ಥರಾಗಿದ್ದಾರೆ. ಎಂದು ವೈದ್ಯಕೀಯ ವರದಿ ತಿಳಿಸಿತ್ತು. ಈ ಕಾರಣದಿಂದಾಗಿ ವಿಕಾಸ್ ಕೃಷ್ಣ ಕಣದಿಂದ ಹಿಂದೆ ಸರಿದಿದ್ದಾರೆ.
Next Story