ಕ್ರೀಡಾಸ್ಫೂರ್ತಿ ಮೆರೆದ ಚಹಾಲ್
ಹೊಸದಿಲ್ಲಿ, ಸೆ.20: ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಪಂದ್ಯ ನಡೆಯುತ್ತಿರುವಾಗ ಉಭಯ ದೇಶಗಳ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ನಿಂದಿಸಿಕೊಳ್ಳುವುದು ಸರ್ವೇಸಾಮಾನ್ಯ. ಇದಕ್ಕೆ ಬುಧವಾರ ನಡೆದ ಏಶ್ಯಕಪ್ ಪಂದ್ಯ ಕೂಡ ಹೊರತಾಗಿರಲಿಲ್ಲ. ಈ ಎರಡು ದೇಶಗಳ ಜನರು ಭಾರತದ ಸ್ಪಿನ್ನರ್ ಯಜುವೇಂದ್ರ ಚಹಾಲ್ ಅವರು ಕ್ರೀಡಾಸ್ಫೂರ್ತಿಯನ್ನು ಮೆರೆದಿದ್ದನ್ನು ಶ್ಲಾಘಿಸಿ ಗಮನ ಸೆಳೆದಿದ್ದಾರೆ. ಚಹಾಲ್ ಪಂದ್ಯದ ವೇಳೆ ಪಾಕಿಸ್ತಾನದ ದಾಂಡಿಗ ಉಸ್ಮಾನ್ ಖಾನ್ ಅವರ ಕಳಚಿಹೋಗಿದ್ದ ಶೂ ದಾರವನ್ನು ಕಟ್ಟಿದ್ದರು. ಈ ಒಂದು ದೃಶ್ಯ ಎಲ್ಲರ ಶ್ಲಾಘನೆಗೆ ಒಳಗಾಗಿದ್ದು ಮಾತ್ರವಲ್ಲ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಟ್ವಿಟರ್ನಲ್ಲಿ ಚಹಾಲ್ ಎದುರಾಳಿ ತಂಡದ ಆಟಗಾರನ ಶೂ ದಾರವನ್ನು ಕಟ್ಟಿರುವುದಕ್ಕೆ ಕ್ರಿಕೆಟ್ ಅಭಿಮಾನಿಗಳು ಪ್ರಶಂಸಿಸಿದ್ದಾರೆ.
Next Story