ಖೇಲ್ ರತ್ನ ಪುರಸ್ಕಾರಕ್ಕೆ ಕಡೆಗಣನೆ: ಕೋರ್ಟ್ ಮೆಟ್ಟಿಲೇರಲು ಬಜರಂಗ್ ಪುನಿಯಾ ನಿರ್ಧಾರ
ಹೊಸದಿಲ್ಲಿ, ಸೆ.21: ರಾಜೀವ್ ಗಾಂಧಿ ಖೇಲ್ ರತ್ನ ಪುರಸ್ಕಾರಕ್ಕೆ ತನ್ನನ್ನು ಕಡೆಗಣಿಸಿರುವುದರ ವಿರುದ್ಧ ಭಾರತದ ಕುಸ್ತಿಪಟು ಬಜರಂಗ್ ಪುನಿಯಾ ಕೋರ್ಟ್ ಮೆಟ್ಟಲೇರಲು ನಿರ್ಧರಿಸಿದ್ದಾರೆ.
ಪುನಿಯಾ ಅವರ ಇತ್ತೀಚಿನ ಸಾಧನೆಗಳ ಹಿನ್ನೆಲೆಯಲ್ಲಿ ಖೇಲ್ ರತ್ನ ಪುರಸ್ಕಾರದ ಪಟ್ಟಿಯಲ್ಲಿರುವ ನೆಚ್ಚಿನ ಕ್ರೀಡಾಪಟುವಾಗಿದ್ದರು ಪುನಿಯಾ. ಜಕಾರ್ತದಲ್ಲಿ ನಡೆದ ಗೋಲ್ಡ್ ಕೋಸ್ಟ್ ನಲ್ಲಿ ಅವು ಚಿನ್ನದ ಪದಕಗಳನ್ನು ಗೆದ್ದಿದ್ದರು.
ಸೋಮವಾರ ಆಯ್ಕೆ ಸಮಿತಿ ಅತ್ಯುನ್ನತ ಕ್ರೀಡಾ ಗೌರವವನ್ನು ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರನ್ನು ಆಯ್ಕೆ ಮಾಡಿತ್ತು.
ಆಯ್ಕೆ ಸಮಿತಿಯ ಈ ನಿರ್ಧಾರದಿಂದ ನನಗೆ ನೋವಾಗಿದೆ. ಅವರ ತಲೆಯಲ್ಲಿ ಏನಿತ್ತು ಎನ್ನುವುದು ನನಗೆ ಗೊತ್ತಿಲ್ಲ. ನಾಳೆ ನಾನು ದಿಲ್ಲಿಗೆ ಬರಲಿದ್ದೇನೆ ಹಾಗು ನ್ಯಾಯಾಲಯದ ಮೆಟ್ಟಿಲೇರಲಿದ್ದೇನೆ” ಎಂದು ಪುನಿಯಾ ಹೇಳಿದ್ದಾರೆ.
Next Story