3ನೇ ಏಕದಿನ: ದಂಗುಬಡಿಸುವ ಕ್ಯಾಚ್ ಪಡೆದ ಧೋನಿ
ಪುಣೆ, ಅ.27: ಬಿಸಿಸಿಐ ಶುಕ್ರವಾರ ವೆಸ್ಟ್ಇಂಡೀಸ್ ಹಾಗೂ ಆಸ್ಟ್ರೇಲಿಯ ವಿರುದ್ಧದ ಟ್ವೆಂಟಿ-20 ಸರಣಿಗೆ ಎಂಎಸ್ ಧೋನಿಯವರನ್ನು ಕೈಬಿಟ್ಟು ಅಚ್ಚರಿಗೊಳಿಸಿತ್ತು. ಆಯ್ಕೆ ಸಮಿತಿಯ ನಿರ್ಧಾರಕ್ಕೆ ಶನಿವಾರ ವಿಕೆಟ್ಕೀಪರ್-ಬ್ಯಾಟ್ಸ್ಮನ್ ಧೋನಿ ತಕ್ಕ ಉತ್ತರ ನೀಡಿದ್ದಾರೆ.
ವೆಸ್ಟ್ಇಂಡೀಸ್ ವಿರುದ್ಧ ಶನಿವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಚಿತ್ತಾಕರ್ಷಕ ಕ್ಯಾಚ್ ಪಡೆದ ಧೋನಿ ಎಲ್ಲರನ್ನು ದಂಗಾಗಿಸಿದರು. ತನ್ನನ್ನು ಟ್ವೆಂಟಿ-20 ಸರಣಿಗೆ ಕಡೆಗಣಿಸಿದ್ದು ತಪ್ಪು ಎಂಬ ಸಂದೇಶ ರವಾನಿಸಿದರು.
ವೆಸ್ಟ್ಇಂಡೀಸ್ ತನ್ನ ಇನಿಂಗ್ಸ್ ಆರಂಭಿಸಿದ ತಕ್ಷಣ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಮೊದಲ ವಿಕೆಟ್ ಪಡೆದರು. 5.5ನೇ ಓವರ್ನಲ್ಲಿ ಬುಮ್ರಾ ಎಸೆತವನ್ನು ಕೆಣಕಲು ಹೋದ ಚಂದ್ರಪಾಲ್ ಹೇಮರಾಜ್ ಕೇವಲ 15 ರನ್ಗೆ ವಿಕೆಟ್ಕೀಪರ್ ಧೋನಿ ಪಡೆದ ಅದ್ಭುತ ಕ್ಯಾಚ್ಗೆ ಔಟಾದರು. ಹೇಮರಾಜ್ ನೀಡಿದ ಕ್ಯಾಚನ್ನು ಪಡೆಯಲು ಕೀಪಿಂಗ್ ಸ್ಥಳದಿಂದ ಓಡಿದ ವಿಕೆಟ್ಕೀಪರ್ ಧೋನಿ ಮುಂದಕ್ಕೆ ಹಾರಿ ಚೆಂಡನ್ನು ಹಿಡಿದರು. ಮೊಣಕೈ ಮೈದಾನಕ್ಕೆ ತಾಗಿದರೂ ಅದನ್ನು ಲೆಕ್ಕಿಸದೇ ಉತ್ತಮ ಕ್ಯಾಚ್ ಪಡೆದರು.