ವಿಶ್ವಕಪ್ನಲ್ಲಿ ಭಾರತ ಸೆಮಿಫೈನಲ್ಗೆ ತಲುಪಲಿದೆ
ಚಾಮಿಂಡಾ ವಾಸ್
ಮುಂಬೈ, ಎ.23: ‘‘ಭಾರತ ಒಂದು ಸಮತೋಲಿತ ಹಾಗೂ ಫಾರ್ಮ್ನಲ್ಲಿರುವ ತಂಡ. ಹೀಗಾಗಿ ಮುಂಬರುವ ಐಸಿಸಿ ಕ್ರಿಕೆಟ್ ವಿಶ್ವಕಪ್ನಲ್ಲಿ ಸೆಮಿ ಫೈನಲ್ಗೆ ತಲುಪುವುದು ನಿಶ್ಚಿತ’’ಎಂದು ಶ್ರೀಲಂಕಾದ ಮಾಜಿ ವೇಗದ ಬೌಲರ್ ಚಾಮಿಂಡಾ ವಾಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ನಲ್ಲಿ ಮೇ 30 ರಿಂದ ಆರಂಭವಾಗಲಿರುವ ವಿಶ್ವಕಪ್ ಟೂರ್ನಿಯಲ್ಲಿ ತನ್ನ ದೇಶದ ಕ್ರಿಕೆಟ್ ತಂಡಕ್ಕಿರುವ ಅವಕಾಶದ ಬಗ್ಗೆ ಪ್ರತಿಕ್ರಿಯಿಸುತ್ತಾ, ಸ್ಲಿಂಗ್ ಶೈಲಿಯ ವೇಗದ ಬೌಲರ್ ಲಸಿತ್ ಮಾಲಿಂಗ ಪ್ರಮುಖ ಆಟಗಾರನಾಗಿದ್ದಾರೆ ಎಂದರು. ‘‘ಭಾರತೀಯ ಕ್ರಿಕೆಟ್ ತಂಡ ಕಳೆದ ಎರಡು-ಮೂರು ವರ್ಷಗಳಿಂದ ಪ್ರಾಬಲ್ಯ ಸಾಧಿಸುತ್ತಾ ಬಂದಿದ್ದು, ಆ ತಂಡದಲ್ಲಿ ಉತ್ತಮ ಮೀಸಲು ವೇಗದ ಬೌಲರ್ಗಳಿದ್ದಾರೆ. ಆ ತಂಡ ಸಮತೋಲಿತವಾಗಿದ್ದು, ಉತ್ತಮ ಪ್ರದರ್ಶನ ನೀಡಲಿದೆ. ವಿಶ್ವಕಪ್ನಲ್ಲಿ ಭಾರತ ಸೆಮಿ ಫೈನಲ್ಗೆ ತಲುಪುವುದು ನಿಶ್ಚಿತ’’ ಎಂದು ಸುದ್ದಿಗಾರರಿಗೆ ಮಂಗಳವಾರ ವಾಸ್ ತಿಳಿಸಿದರು.
ಮಾಜಿ ಸಹ ಆಟಗಾರ ಎಡಗೈ ಸ್ಪಿನ್ನರ್ ರಂಗನ ಹೆರಾತ್ರೊಂದಿಗೆ ಮುಂಬೈಗೆ ಭೇಟಿ ನೀಡಿರುವ ವಾಸ್ ಸ್ಥಳೀಯ ಟಿ-20 ಟೂರ್ನಮೆಂಟ್ ಉದ್ಘಾಟಿಸಿದರು.