ವಿಶ್ವಕಪ್ ಸೆಮಿ ಫೈನಲ್: ಭಾರತ ವಿರುದ್ಧ ಕಿವೀಸ್ ಬ್ಯಾಟಿಂಗ್ ಆಯ್ಕೆ
ಭುವನೇಶ್ವರ್ ಗೆ ಸ್ಥಾನ, ಶಮಿ ಹೊರಕ್ಕೆ
ಮ್ಯಾಂಚೆಸ್ಟರ್, ಜು.9: ವಿಶ್ವಕಪ್ನ ಸೆಮಿ ಫೈನಲ್ ಪಂದ್ಯದಲ್ಲಿ ಮಂಗಳವಾರ ಭಾರತ ವಿರುದ್ಧ ಟಾಸ್ ಜಯಿಸಿದ ನ್ಯೂಝಿಲ್ಯಾಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುವ ನಿರ್ಧಾರ ಕೈಗೊಂಡಿದೆ.
ಭಾರತ ಆಡುವ ಬಳಗದಲ್ಲಿ ವೇಗದ ಬೌಲರ್ಗಳಾದ ಭುವನೇಶ್ವರ ಕುಮಾರ್ ಹಾಗೂ ಜಸ್ಪ್ರೀತ್ ಬುಮ್ರಾಗೆ ಅವಕಾಶ ನೀಡಿದ್ದು, ಮುಹಮ್ಮದ್ ಶಮಿ ಅವರನ್ನು ಕೈಬಿಟ್ಟಿದೆ. ಸ್ಪಿನ್ನರ್ ಕುಲದೀಪ್ ಯಾದವ್ ಬದಲಿಗೆ ಯಜುವೇಂದ್ರ ಚಹಾಲ್ ಅಂತಿಮ-11ರ ಬಳಗದಲ್ಲಿದ್ದಾರೆ.
ನ್ಯೂಝಿಲ್ಯಾಂಡ್ ತಂಡದಲ್ಲಿ ಟಿಮ್ ಸೌಥಿ ಬದಲಿಗೆ ಫರ್ಗ್ಯುಸನ್ ವಾಪಸಾಗಿದ್ದಾರೆ.
Next Story