ಧೋನಿಗೆ ತಕ್ಷಣ ನಿವೃತ್ತಿಯಾಗದಂತೆ ಟೀಮ್ ಮ್ಯಾನೇಜ್ಮೆಂಟ್ ಸೂಚನೆ
ಮುಂಬೈ, ಜು.22: ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಅವರು ತಕ್ಷಣ ಅಂತರ್ರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗುವುದು ಟೀಮ್ ಮ್ಯಾನೇಜ್ಮೆಂಟ್ಗೆ ಇಷ್ಟವಿಲ್ಲ. 2020 ಟ್ವೆಂಟಿ-20 ವಿಶ್ವಕಪ್ ವೇಳೆಗೆ ಧೋನಿಯ ಉತ್ತರಾಧಿಕಾರಿಯಾಗಿ ರಿಷಭ್ ಪಂತ್ ಅವರನ್ನು ರೂಪಿಸಲು ಟೀಮ್ ಮ್ಯಾನೇಜ್ಮೆಂಟ್ ಬಯಸಿದೆ.
ಈಗಿನ ಪರಿಸ್ಥಿತಿಯಲ್ಲಿ ಧೋನಿ ನಿವೃತ್ತಿಯಾದರೆ ಅವರ ಸ್ಥಾನವನ್ನು ತುಂಬಲು ರಿಷಭ್ ಪಂತ್ ಸಮರ್ಥರಾಗಿಲ್ಲ. ಪಂತ್ಗೆ ಮೆಂಟರ್ ಆಗಿ ಧೋನಿ ಸೇವೆಯನ್ನು ಬಳಸಿಕೊಳ್ಳುವ ಚಿಂತನೆ ನಡೆದಿದೆ.
ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ಕೆ ಪ್ರಸಾದ್ ವೆಸ್ಟ್ಇಂಡೀಸ್ ಪ್ರವಾಸಕ್ಕೆ ತಂಡವನ್ನು ಪ್ರಕಟಿಸುವ ವೇಳೆ ಧೋನಿ ಸದ್ಯಕ್ಕೆ ನಿವೃತ್ತಿಯಾಗುವುದಿಲ್ಲ. ಆದರೆ ಅವರ ಉತ್ತರಾಧಿಕಾರಿಯಾಗಿ ರಿಷಭ್ ಪಂತ್ರನ್ನು ರೂಪಿಸುವ ಬಗ್ಗೆ ಹೇಳಿದ್ದರು.
ಪ್ಯಾರಾಚೂಟ್ ರೆಜಿಮೆಂಟ್ನಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿರುವ ಧೋನಿ ಟೀಮ್ ಇಂಡಿಯಾದಿಂದ ಎರಡು ತಿಂಗಳುಗಳ ಕಾಲ ದೂರ ಉಳಿದು ಪ್ಯಾರಾಮಿಲಿಟರಿ ರೆಜಿಮೆಂಟ್ನಲ್ಲಿ ತನ್ನ ಕರ್ತವ್ಯ ನಿರ್ವಹಿಸಲಿದ್ದಾರೆ. ಈ ಕಾರಣದಿಂದಾಗಿ ವೆಸ್ಟ್ಇಂಡೀಸ್ ಪ್ರವಾಸಕ್ಕೆ ಧೋನಿ ಲಭ್ಯರಿಲ್ಲವೆಂದು ತಿಳಿಸಿರುವುದಾಗಿ ಎಂಎಸ್ಕೆ ಪ್ರಸಾದ್ ಮಾಹಿತಿ ನೀಡಿದ್ದರು.