ಬೆಂಗಳೂರು ಬ್ಲಾಸ್ಟರ್ಸ್ಗೆ ಮೊದಲ
ಜಯ ಕೆಪಿಎಲ್ ಟಿ-20 ಟೂರ್ನಿ
ಬೆಂಗಳೂರು, ಆ.22: ಇಲ್ಲಿ ನಡೆದ ಕೆಪಿಎಲ್ ಟ್ವೆಂಟಿ-20 ಟೂರ್ನಿಯ 12ನೇ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್ 1 ರನ್ ಅಂತರದಲ್ಲಿ ರೋಚಕ ಜಯ ಗಳಿಸಿದೆ.
ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಳೆ ಬಾಧಿತ ಪಂದ್ಯದಲ್ಲಿ ವಿಜೆಡಿ ನಿಯಮದಂತೆ ಗೆಲುವಿಗೆ 8.2 ಓವರ್ಗಳಲ್ಲಿ 57 ರನ್ ಗಳಿಸಬೇಕಿದ್ದ ಬಳ್ಳಾರಿ ಟಸ್ಕರ್ಸ್ ತಂಡ 5 ವಿಕೆಟ್ ನಷ್ಟದಲ್ಲಿ 57 ರನ್ ಗಳಿಸಿತು.
ಬಳ್ಳಾರಿ ತಂಡವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದ ಭರತ್ ಧುರಿ(1.2-0-9-2) ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಬಳ್ಳಾರಿ ತಂಡದ ಅಭಿಷೇಕ್ ರೆಡ್ಡಿ (30) ಮಾತ್ರ ಎರಡಂಕೆಯ ಸ್ಕೋರ್ ದಾಖಲಿಸಿದರು. ಇದರೊಂದಿಗೆ ಬೆಂಗಳೂರು ಆಡಿರುವ 4 ಪಂದ್ಯಗಳಲ್ಲಿ ಮೊದಲ ಜಯ ಗಳಿಸಿದೆ. 1 ಪಂದ್ಯದಲ್ಲಿ ಸೋಲು, 1 ಪಂದ್ಯ ಟೈ ಆಗಿತ್ತು 1 ಪಂದ್ಯ ಫಲಿತಾಂಶವಿಲ್ಲದೆ ರದ್ದಾಗಿತ್ತು. ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಬೆಂಗಳೂರು ತಂಡದ ಬ್ಯಾಟಿಂಗ್ಗೆ ಮಳೆ ಅಡ್ಡಿಪಡಿಸಿತ್ತು. 16 ಓವರ್ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 93 ರನ್ ಗಳಿಸಿತ್ತು. ರೋಹನ್ ಕದಮ್(22), ಶರತ್ ಬಿ.ಆರ್ (16), ನಾಯಕ ರಾಂಗ್ಸೆನ್ ಜೋನಾಥನ್ (14), ಮತ್ತು ಕೆ.ಎನ್.ಭರತ್(16) ಎರಡಂಕೆಯ ಸ್ಕೋರ್ ದಾಖಲಿಸಿದ್ದರು.