ಮುರಳಿ ವಿಜಯ್ಗೆ ದಂಡ
ದಿಂಡಿಗಲ್, ಡಿ. 9: ತಮಿಳುನಾಡಿನ ಆರಂಭಿಕ ಬ್ಯಾಟ್ಸ್ಮನ್ ಮುರಳಿ ವಿಜಯ್ ಅವರು ಅಂಪೈರ್ ನಿರ್ಧಾರಕ್ಕೆ ಅಗೌರವ ತೋರಿದ್ದಕ್ಕಾಗಿ ಪಂದ್ಯ ಶುಲ್ಕದ ಶೇ. 10ರಷ್ಟು ದಂಡ ವಿಧಿಸಲಾಗಿದೆ. ಸೋಮವಾರ ಇಲ್ಲಿ ಆರಂಭಗೊಂಡ ತಮಿಳುನಾಡು-ಕರ್ನಾಟಕ ತಂಡಗಳ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕದ ಮೊದಲ ಇನಿಂಗ್ಸ್ನ 70ನೇ ಓವರ್ನ ವೇಳೆ ಈ ಘಟನೆ ನಡೆದಿದೆ. ಆರ್.ಅಶ್ವಿನ್ ಬೌಲಿಂಗ್ನಲ್ಲಿ ಪವನ್ ದೇಶ್ಪಾಂಡೆ ಔಟೆಂದು ಎರಡು ಬಾರಿ ತಮಿಳುನಾಡಿನ ಬೌಲರ್ಗಳು ಮನವಿ ಮಾಡಿದಾಗ ಅಂಪೈರ್ ನಿತಿನ್ ಪಂಡಿತ್ ಅವರ ಮನವಿಯನ್ನು ತಿರಸ್ಕರಿಸಿದರು.
ಸ್ಲಿಪ್ನಲ್ಲಿದ್ದ ಮುರಳಿ ವಿಜಯ್ ಸಿಟ್ಟಿನಿಂದ ತನ್ನ ತಲೆಯಲ್ಲಿದ್ದ ಕ್ಯಾಪ್ನ್ನು ತೆಗೆದು ಪಿಚ್ನ ಮಧ್ಯಭಾಗಕ್ಕೆ ಧಾವಿಸಿದರು. ಆಗ ಮಧ್ಯಪ್ರವೇಶಿಸಿದ ಸ್ಕ್ವಾರ್ಲೆಗ್ ಅಂಪೈರ್ ಅನಿಲ್ ಡಂಡೇಕರ್ ಅವರು ವಿಜಯ್ ಮತ್ತು ಅವರ ತಂಡದ ಸದಸ್ಯರನ್ನು ಸಮಾಧಾನಪಡಿಸಿದರು ಎನ್ನಲಾಗಿದೆ.
Next Story