ಚೆನ್ನೈ ಓಪನ್: ಸೋಮ್ದೇವ್, ಸಾಕೇತ್ಗೆ ವೈಲ್ಡ್ಕಾರ್ಡ್ ಇಲ್ಲ
ಹೊಸದಿಲ್ಲಿ, ಜ.1: ತಮಿಳುನಾಡು ಟೆನಿಸ್ ಸಂಸ್ಥೆಯಲ್ಲಿ ವೈಲ್ಡ್ಕಾರ್ಡ್ ಕೊರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾರತದ ಪ್ರಮುಖ ಸಿಂಗಲ್ಸ್ ಆಟಗಾರರಾದ ಸೋಮ್ದೇವ್ ದೇವ್ವರ್ಮನ್ ಹಾಗೂ ಸಾಕೇತ್ ಮೈನೇನಿ ಜ.4 ರಿಂದ ಆರಂಭವಾಗಲಿರುವ ಚೆನ್ನೈ ಓಪನ್ಗೆ ಪ್ರವೇಶ ಪಡೆಯಲು ಅರ್ಹತಾ ಸುತ್ತಿನಲ್ಲಿ ಆಡಬೇಕಾಗಿದೆ.
‘‘ತನ್ನ ಬಳಿ ಕೇವಲ ಒಂದು ವೈಲ್ಡ್ಕಾರ್ಡ್ ಇತ್ತು. ಆ ಒಂದು ಕಾರ್ಡನ್ನು ಸ್ಥಳೀಯ ಆಟಗಾರ ರಾಮ್ಕುಮಾರ್ ರಾಮನಾಥನ್ಗೆ ನೀಡಲಾಗಿದೆ. ಸೋಮ್ದೇವ್ ಹಾಗೂ ಸಾಕೇತ್ ಅರ್ಹತಾ ಸುತ್ತಿನ ಮೂಲಕ ಟೂರ್ನಿ ಪ್ರವೇಶಿಸಬೇಕಾಗಿದೆ ಎಂದು ತಮಿಳುನಾಡು ಟೆನಿಸ್ ಸಂಸ್ಥೆ ಹೇಳಿದೆ.
ಎಟಿಪಿ ರ್ಯಾಂಕಿಂಗ್ನಲ್ಲಿ 93ನೆ ಸ್ಥಾನದಲ್ಲಿರುವ ಯೂಕಿ ಭಾಂಬ್ರಿ ನೇರ ಪ್ರವೇಶ ಪಡೆದಿದ್ದರು. ಆದರೆ, ಅವರು ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
Next Story