ದಿಲ್ಲಿ ತಂಡದಲ್ಲಿ ಧವನ್, ಇಶಾಂತ್ಗೆ ಸ್ಥಾನ
ಮುಶ್ತಾಕ್ ಅಲಿ ಟ್ವೆಂಟಿ-20 ಟೂರ್ನಿ
ಹೊಸದಿಲ್ಲಿ, ಜ.21: ಸೈಯದ್ ಮುಶ್ತಾಕ್ ಅಲಿ ಟ್ರೋಫಿಗಾಗಿ ನಡೆಯಲಿರುವ ಟ್ವೆಂಟಿ-20 ಟೂರ್ನಿಗೆ ದಿಲ್ಲಿ ತಂಡವನ್ನು ಪ್ರಕಟಿಸಲಾಗಿದ್ದು, ಆರಂಭಿಕ ಆಟಗಾರ ಶಿಖರ್ ಧವನ್ ಹಾಗೂ ವೇಗದ ಬೌಲರ್ ಇಶಾಂತ್ ಶರ್ಮ ಸ್ಥಾನ ಪಡೆದಿದ್ದಾರೆ.
ದಿಲ್ಲಿ ತಂಡಕ್ಕೆ ಗೌತಮ್ ಗಂಭೀರ್ ನಾಯಕತ್ವವಹಿಸಿಕೊಳ್ಳಲಿದ್ದು, ಯುವ ವಿಕೆಟ್ಕೀಪರ್-ಬ್ಯಾಟ್ಸ್ಮನ್ ಅರ್ಜುನ್ ಗುಪ್ತಾ ಅವರು ರಿಷಬ್ ಪಂತ್ ಬದಲಿಗೆ ಆಡಲಿದ್ದಾರೆ. ಪಂತ್ ಇಂಗ್ಲೆಂಡ್ ವಿರುದ್ಧ ಜ.26ರಂದು ಆರಂಭವಾಗಲಿರುವ ಟ್ವೆಂಟಿ-20 ಸರಣಿಗೆ ಆಯ್ಕೆಯಾಗಿದ್ದಾರೆ.
ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕಳಪೆ ಫಾರ್ಮ್ನಲ್ಲಿರುವ ಶಿಖರ್ ಧವನ್ ಭಾರತ ತಂಡಕ್ಕೆ ಟ್ವೆಂಟಿ-20 ಸರಣಿಗೆ ಆಯ್ಕೆಯಾಗಿಲ್ಲ. ಇಶಾಂತ್ ಸೀಮಿತ ಓವರ್ ಕ್ರಿಕೆಟ್ನಲ್ಲಿ ಮಿಂಚದೇ ಕೆಲವು ಸಮಯ ಕಳೆದಿದೆ. ಐಪಿಎಲ್ ಆಟಗಾರರ ಹರಾಜಿಗೆ ಮೊದಲು ಉತ್ತಮ ಪ್ರದರ್ಶನ ನೀಡಲು ಬಯಸಿದ್ದಾರೆ. ಇಶಾಂತ್ ಪ್ರಸ್ತುತ ಐಪಿಎಲ್ ಒಪ್ಪಂದಕ್ಕೆ ಸಹಿಹಾಕಿಲ್ಲ.
ದಿಲ್ಲಿ ತಂಡ: ಗೌತಮ್ ಗಂಭೀರ್(ನಾಯಕ), ಉನ್ಮುಕ್ತ್ ಚಂದ್, ಶಿಖರ್ ಧವನ್, ನಿತಿಶ್ ರಾಣಾ, ಮಿಲಿಂದ್ ಕುಮಾರ್, ಕ್ಷಿತಿಜ್ ಶರ್ಮ, ಸಾರ್ಥಕ್ ರಂಜನ್, ಅರ್ಜುನ್ ಗುಪ್ತಾ, ಪವನ್ ನೇಗಿ, ಮನನ್ ಶರ್ಮ, ಇಶಾಂತ್ ಶರ್ಮ, ನವದೀಪ್ ಸೈನಿ, ವಿಕಾಸ್ ಟಾಕಸ್, ಪ್ರದೀಪ್ ಸಾಂಗ್ವಾನ್, ಸುಬೋಧ್ ಭಟಿ.