ಭಾರತಕ್ಕೆ ಶುಭಾಶಯ ಕೋರಿದ ಅಖ್ತರ್, ಅಫ್ರಿದಿ
ಹೊಸದಿಲ್ಲಿ, ಜೂ.16: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪ್ರಶಸ್ತಿ ಸುತ್ತಿನ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಪಾಕ್ನ ಮಾಜಿ ಆಟಗಾರರಾದ ಶುಐಬ್ ಅಖ್ತರ್ ಹಾಗೂ ಶಾಹಿದ್ ಅಫ್ರಿದಿ ಟ್ವಿಟರ್ನ ಮೂಲಕ ಟೀಮ್ ಇಂಡಿಯಾಕ್ಕೆ ಮುಂಗಡವಾಗಿ ಶುಭಾಶಯ ಸಂದೇಶ ಕಳುಹಿಸಿಕೊಟ್ಟಿದ್ದಾರೆ.
‘‘ಚಾಂಪಿಯನ್ಸ್ ಟ್ರೋಫಿ ಫೈನಲ್ಗೆ ತಲುಪಿರುವ ಭಾರತಕ್ಕೆ ಅಭಿನಂದನೆ. ರವಿವಾರ ಭಾರತ-ಪಾಕ್ ನಡುವೆ ಮೇಗಾ ಸ್ಪರ್ಧೆ ನಡೆಯಲಿದೆ. ಪಾಕ್ಗೂ ಶುಭಾಶಯ. ಟೈಗರ್ಸ್ನ್ನು ಬದಿಗೆ ಸರಿಸಿ, ಸೋತರೂ, ಗೆದ್ದರೂ ನಾನು ನಿಮ್ಮೊಂದಿಗಿರುವೆ’’ ಎಂದು ಅಖ್ತರ್ ಟ್ವೀಟ್ ಮಾಡಿದ್ದಾರೆ.
ಭಾರತ ಟೂರ್ನಿಯಲ್ಲಿ ಫೈನಲ್ಗೆ ತಲುಪಿದ ತಕ್ಷಣ ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿಯಾಗಿರುವ ಅಫ್ರಿದಿ ಭಾರತಕ್ಕೆ ಟ್ವಿಟರ್ನ ಮೂಲಕ ಅಭಿನಂದನೆಯ ಸಂದೇಶ ಕಳುಹಿಸಿಕೊಟ್ಟಿದ್ದಾರೆ.
‘‘ಭಾರತ ಚೆನ್ನಾಗಿ ಆಡಿದೆ. ಇದೀಗ ಕ್ರಿಕೆಟ್ನ ಅತ್ಯಂತ ದೊಡ್ಡ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಶಾಂತ ಚಿತ್ತದಿಂದಿದ್ದು, ಪಾಕಿಸ್ತಾನ ತಂಡದತ್ತ ಗಮನ ನೀಡಿ’’ ಎಂದು ಅಫ್ರಿದಿ ಟ್ವೀಟ್ ಮಾಡಿದ್ದಾರೆ.