ಉಗ್ರರ ದಾಳಿಯಿಂದ ಮಡಿದವರಿಗಾಗಿ ಸ್ಪರ್ಧೆಯನ್ನು ತ್ಯಾಗ ಮಾಡಿದ ಸ್ಪೇನ್ ಈಜುಗಾರ
ಬಾರ್ಸಿಲೋನಾ, ಆ.22: ಸ್ಪೇನ್ನ ಈಜುಗಾರ ಫೆರ್ನಾಂಡೊ ಅಲ್ವಾರೆಝ್ ಅವರು ಬಾರ್ಸಿಲೋನಾದಲ್ಲಿ ಇತ್ತೀಚೆಗೆ ನಡೆದ ಉಗ್ರರ ದಾಳಿಯಲ್ಲಿ ಮಡಿದವರ ಆತ್ಮಕ್ಕೆ ಚಿರಶಾಂತಿ ಕೋರಿ ವೌನ ಪ್ರಾರ್ಥನೆ ಸಲ್ಲಿಸಿದ ಕಾರಣದಿಂದಾಗಿ 200 ಮೀಟರ್ ಬ್ರೆಸ್ಟ್ಸ್ಟ್ರೋಕ್ ಫೈನಲ್ನಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಂಡ ಘಟನೆ ವರದಿಯಾಗಿದೆ.
ಅಲ್ವಾರೆಝ್ ಸಂಘಟಕರಿಗೆ ಈ ವಿಚಾರದ ಬಗ್ಗೆ ಮಾಹಿತಿ ನೀಡಿದ್ದರು. ಮತ್ತು ತನಗೆ ಒಂದು ನಿಮಿಷ ವೌನಕ್ಕೆ ಅವಕಾಶ ನೀಡುವಂತೆ ಅವರು ವಿನಂತಿಸಿದ್ದರು. ಆದೆರ ಅವರು ಈಜು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಿಲ್ಲ ಎಂದು ತಿಳಿದು ಬಂದಿದೆ.
ಅಲ್ವಾರೆಝ್ ಅವರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದರೆ ಅವರ ಈ ನಿರ್ಧಾರದಿಂದಾಗಿ ಸಹಸ್ರಾರು ಜನರ ಮನ ಗೆದ್ದಿದ್ದಾರೆ.
ಬಾರ್ಸಿಲೋನಾನ ಲಾಸ್ ರ್ಯಾಬ್ಲಾಸ್ ನಗರದಲ್ಲಿ ಕಳೆದ ಬುಧವಾರ ಪಾದಚಾರಿಗಳ ಮೇಲೆ ಉಗ್ರನೊಬ್ಬ ವ್ಯಾನ್ ನುಗ್ಗಿಸಿದ ಪರಿಣಾಮವಾಗಿ 14 ಮಂದಿ ಸಾವಿಗೀಡಾಗಿದ್ದರು.130ಕ್ಕೆ ಅಧಿಕ ಜನರು ಗಾಯಗೊಂಡಿದ್ದರು.
La organización rechazó guardar minuto de silencio por atentado en BCN, así que el gaditano Fernando Álvarez decidió hacerlo por su cuenta. pic.twitter.com/PCVvBGzYbb
— PabloMM (@PabloMM) August 20, 2017