ಮರು ಪರಿಶೀಲನಾ ಅರ್ಜಿ ವಿಚಾರಣೆಗೆ ಒಪ್ಪಿದ ಸುಪ್ರೀಂ
ತಾಜ್ಮಹಲ್ ಸಮೀಪದ ಪಾರ್ಕಿಂಗ್ ಪ್ರದೇಶ ಧ್ವಂಸ ಆದೇಶ
ಹೊಸದಿಲ್ಲಿ, ಅ. 25: ತಾಜ್ಮಹಲ್ನಿಂದ ಕಿಲೋಮೀಟರ್ ದೂರದಲ್ಲಿ ನಿರ್ಮಿಸಲು ಉದ್ದೇಶಿಸಲಿರುವ ಬಹು-ಮಟ್ಟದ ಕಾರು ಪಾರ್ಕಿಂಗ್ ವ್ಯವಸ್ಥೆ ಧ್ವಂಸಗೊಳಿಸುವ ಸುಪ್ರೀಂನ ಕೋರ್ಟ್ನ ಆದೇಶದ ವಿರುದ್ಧ ಉತ್ತರಪ್ರದೇಶ ಸರಕಾರ ಸಲ್ಲಿಸಿರುವ ಮರು ಪರಿಶೀಲನಾ ಅರ್ಜಿಯನ್ನು ಅಕ್ಟೋಬರ್ 27ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಬುಧವಾರ ಒಪ್ಪಿಕೊಂಡಿದೆ.
17ನೆ ಶತಮಾನದ ಸ್ಮಾರಕದ ಈಶಾನ್ಯ ಗೇಟ್ನ ಸಮೀಪ ನಿರ್ಮಿಸಲಾದ ಪಾರ್ಕಿಂಗ್ ವ್ಯವಸ್ಥೆ ಧ್ವಂಸಗೊಳಿಸಲು ಸುಪ್ರೀಂಕೋರ್ಟ್ ನಿನ್ನೆ ಆದೇಶ ನೀಡಿತ್ತು.
ನ್ಯಾಯಮೂರ್ತಿ ಜೆ. ಚಲಮೇಶ್ವರ್ ನೇತೃತ್ವದ ಪೀಠದ ಮುಂದೆ ಉತ್ತರಪ್ರದೇಶ ಸರಕಾರದ ಪರ ವಕೀಲರು ವಿಷಯ ಪ್ರಸ್ತಾಪಿಸಿದರು ಹಾಗೂ ಶೀಘ್ರ ವಿಚಾರಣೆ ನಡೆಸುವಂತೆ ಕೋರಿದರು.
ಬಹು-ಮಟ್ಟದ ಕಾರು ಪಾರ್ಕಿಂಗ್ನ ಧ್ವಂಸ ಆದೇಶದಿಂದ ನಾವು ತೊಂದರೆಗೀಡಾಗಿದ್ದೇವೆ. ಮರು ಪರಿಶೀಲನಾ ಅರ್ಜಿಯನ್ನು ಶೀಘ್ರದಲ್ಲಿ ಪರಿಗಣಿಸಿ ಎಂದು ನಾವು ಕೋರುತ್ತೇವೆ ಎಂದು ರಾಜ್ಯ ಸರಕಾರದ ಪರ ವಕೀಲ ಐಶ್ವರ್ಯಾ ಭಾಟಿ ವಿನಂತಿಸಿದ್ದರು.
Next Story