ಈ ದೇಶದ ಪ್ರಜೆಯೆನ್ನಲು ನಾಚಿಕೆಯಾಗುತ್ತಿದೆ: ನಿರ್ದೇಶಕ ನೀರಜ್ ಗಯ್ವಾನ್
ಹೊಸದಿಲ್ಲಿ, ನ. 24: ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ನೀರಜ್ ಗಯ್ವಾನ್ ಪದ್ಮಾವತಿ ಸಿನೆಮಾ ಕುರಿತ ವಿವಾದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ್ದು, ಈ ದೇಶದ ಪ್ರಜೆಯೆನ್ನಲು ಲಜ್ಜೆಯಾಗುತ್ತಿದೆ ಎಂದಿದ್ದಾರೆ.
ನಟಿ ದೀಪಿಕಾ ಪಡುಕೋಣೆಯರ ಮೂಗು ಕತ್ತರಿಸುವವರಿಗೆ ಐದು ಕೋಟಿ ಬಹುಮಾನ ಕೊಡುತ್ತೇವೆ ಎಂಬುದಾಗಿ ಚಾನೆಲ್ಗಳಲ್ಲಿ ಕುಳಿತು ಕೆಲವರು ಹೇಳುತ್ತಿದ್ದಾರೆ, ಇದು ದುರದೃಷ್ಟಕರ. ಇಂತಹದೊಂದು ದೇಶದಲ್ಲಿ ನಾವು ಬದುಕುತ್ತಿದ್ದೇವೆ ಎಂದು ಚಿಂತಿಸುವಾಗ ಬೇಸರವಾಗುತ್ತಿದೆ ಎಂದು ನೀರಜ್ ಹೇಳಿದರು.
ಸೂಪರ್ ಸ್ಟಾರ್ ಆಗಿರುವ ಒಬ್ಬ ನಟಿಗೆ ಇಂತಹ ಬೆದರಿಕೆಯೊಡ್ಡುವವರ ವಿರುದ್ಧ ಯಾಕೆ ಕಾನೂನು ಕ್ರಮ ಜರುಗಿಸಲಾಗುತ್ತಿಲ್ಲ. ಇವರ ಬೆದರಿಕೆಗಳೆಲ್ಲವೂ ಕಲ್ಪನೆಯ ಒಂದು ಕಥಾ ಪಾತ್ರದ ವಿರುದ್ಧವಾಗಿದೆ ಎನ್ನುವುದು ವಿರೋಧಭಾಸಕರವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನೀರಜ್ ಗಾಯ್ವಾನ್ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ಮಾಸಾನ್ನ ನಿರ್ದೇಶಕರಾಗಿದ್ದಾರೆ.
Next Story