ಯೋಜನೆಗಳನ್ನು ತಿಳಿಯಲು ಜನ ಬಯಸಿದ್ದಾರೆ ಹೊರತು ಕಾಂಗ್ರೆಸ್ ವಿರುದ್ಧದ ಟೀಕೆಯನ್ನಲ್ಲ
ಪ್ರಧಾನಿ ಭಾಷಣಕ್ಕೆ ಶಿವಸೇನೆ ತಿರುಗೇಟು
ಹೊಸದಿಲ್ಲಿ,ಫೆ.7: ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಲೋಕಸಭೆಯಲ್ಲಿ ಮಾಡಿದ ಭಾಷಣವನ್ನು ಟೀಕಿಸಿರುವ ಶಿವಸೇನೆಯು, ಪ್ರಧಾನಿಯಿಂದ ಸರಕಾರದ ಯೋಜನೆಗಳ ಬಗ್ಗೆ ತಿಳಿಯಲು ಜನರು ಬಯಸಿದ್ದರೇ ಹೊರತು ಕಾಂಗ್ರೆಸ್ ಪಕ್ಷದ ಟೀಕೆಯನ್ನಲ್ಲ ಎಂದು ಕುಟುಕಿದೆ.
ತನ್ನ ಸರಕಾರವು ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾಗಿವೆ ಎನ್ನುವುದನ್ನು ಮೋದಿಯವರು ತಿಳಿದುಕೊಳ್ಳಬೇಕಿದೆ. ಜನರು ಕಾಂಗ್ರೆಸ್ ಆಡಳಿತದಿಂದ ರೋಸಿ ಹೋಗಿದ್ದರು ಮತ್ತು ಅದೇ ಕಾರಣದಿಂದ ನಿಮ್ಮನ್ನು ಆಯ್ಕೆ ಮಾಡಿದ್ದರು. ಜನರು ನಿಮ್ಮ ಯೋಜನೆಗಳ ಬಗ್ಗೆ ಕೇಳಲು ಬಯಸಿದ್ದಾರೆಯೇ ವಿನಃ ಕಾಂಗ್ರೆಸಿನ ಟೀಕೆಯನ್ನಲ್ಲ ಎಂದು ಶಿವಸೇನೆಯ ವಕ್ತಾರೆ ಮನೀಷಾ ಕಾಯಂದೆ ಹೇಳಿದರು.
Next Story