ಒಡಿಶಾ ಸಿಎಂ ನವೀನ್ ಪಟ್ನಾಯಕ್ ಮೇಲೆ ಶೂ ಎಸೆತ
ಬಂಧಿತ ಹೇಳಿದ್ದೇನು?
ಒಡಿಶಾ, ಫೆ.21: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮೇಲೆ ವ್ಯಕ್ತಿಯೊಬ್ಬ ಶೂಗಳನ್ನು ಎಸೆದ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಶೂ ಎಸೆದ ಕಾರ್ತಿಕ್ ಮೆಹೆರ್ ಎಂಬಾತನನ್ನು ಬಂಧಿಸಲಾಗಿದೆ.
“ಈ ಕೃತ್ಯ ಎಸಗುವಂತೆ ಮೂವರು ನನ್ನನ್ನು ಪ್ರಚೋದಿಸಿದ್ದರು. ಅವರು ಬಿಜೆಪಿ, ಬಿಜೆಡಿ ಹಾಗು ಆಮ್ ಆದ್ಮಿ ಪಕ್ಷದವರಾಗಿರಬಹುದು. ನಾನ್ಯಾಕೆ ಅವರ ಹೆಸರನ್ನು ಬಹಿರಂಗಪಡಿಸಲಿ” ಎಂದು ಬಂಧಿತ ಕಾರ್ತಿಕ್ ಹೇಳಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
“ನಾನು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ. ಇಲ್ಲಿಗೆ ಬಂದು ರಾಜಕೀಯ ನಾಯಕರು ಸಾರ್ವಜನಿಕ ಕಾರ್ಯಕ್ರಮ ಮಾಡುವುದೇಕೆ?, ಜನರೇ ಜನಪ್ರತಿನಿಧಗಳನ್ನು ಸುಲಭವಾಗಿ ಆಯ್ಕೆ ಮಾಡುತ್ತಾರೆ” ಎಂದು ಆತ ಹೇಳಿದ್ದಾನೆ ಎನ್ನಲಾಗಿದೆ.
ಬಾರ್ ಘರ್ ನಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುತ್ತಿದ್ದ ಪಟ್ನಾಯಕ್ ಮೇಲೆ ಶೂಗಳನ್ನು ಎಸೆಯಲಾಗಿತ್ತು.
Next Story