ರಾಜ್ಯಸಭಾ ಚುನಾವಣೆ: ರವಿಶಂಕರ್ ಪ್ರಸಾದ್, ಇತರ ಐವರು ನಾಮಪತ್ರ ಸಲ್ಲಿಕೆ
ಪಾಟ್ನಾ, ಮಾ. 12: ಬಿಹಾರದಿಂದ ರಾಜ್ಯ ಸಭಾ ಚುನಾವಣೆಗೆ ಸೋಮವಾರ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹಾಗೂ ಇತರ ಐವರು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯ ರವಿಶಂಕರ್ ಪ್ರಸಾದ್ ಅವರ ರಾಜ್ಯಸಭಾ ಅಧಿಕಾರದ ಅವಧಿ ಎಪ್ರಿಲ್ 2ಕ್ಕೆ ಅಂತ್ಯಗೊಳ್ಳಲಿದೆ. ಅವರು ಇತರ ಇಬ್ಬರು ಜೆಡಿ(ಯು) ಅಭ್ಯರ್ಥಿಗಳಾದ ಬಶಿಷ್ಠ ನಾರಾಯಣ ಸಿಂಗ್ ಹಾಗೂ ಮಹೇಂದ್ರ ಪ್ರಸಾದ್ ಅವರೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ. ಸಿಂಗ್ ಬಿಹಾರದ ಜೆಡಿ (ಯು) ಘಟಕದ ಅಧ್ಯಕ್ಷ ಹಾಗೂ ರಾಜ್ಯ ಸಭೆಯ ಹಾಲಿ ಸದಸ್ಯ. ಆರ್ಜೆಡಿಯ ಮನೋಜ್ ಝಾ, ಅಸ್ಫಾಕ್ ಕರೀಮ್ ಹಾಗೂ ಕಾಂಗ್ರೆಸ್ನ ಅಖಿಲೇಶ್ ಪ್ರಸಾದ್ ಸಿಂಗ್ ಕೂಡ ನಾಮಪತ್ರ ಸಲ್ಲಿಸಿದ್ದಾರೆ. ಅಖಿಲೇಶ್ ಪ್ರಸಾದ್ ಸಿಂಗ್ ಯುಪಿಎ 1ರ ಅಡಳಿತದಲ್ಲಿ ಆರ್ಜೆಡಿಯ ಕೇಂದ್ರ ಸಚಿವರಾಗಿದ್ದರು. ರಾಜ್ಯ ಸಭಾ ಚುನಾವಣೆಯ ಮತದಾನ ಹಾಗೂ ಮತ ಎಣಿಕೆ ಮಾರ್ಚ್ 23ರಂದು ನಡೆಯಲಿದೆ.
Next Story