ಆದಿತ್ಯನಾಥ್ ಸರಕಾರ ಸ್ಥಾಪಿಸಿದ್ದ ಅಂಬೇಡ್ಕರರ ಕೇಸರಿ ಬಣ್ಣದ ಪ್ರತಿಮೆಗೆ ನೀಲಿ ಬಣ್ಣ ಬಳಿದ ಬಿಎಸ್ ಪಿ ನಾಯಕ
ಲಕ್ನೋ, ಎ.10: ಆದಿತ್ಯನಾಥ್ ಸರಕಾರ ಬಡೌನ್ ಗ್ರಾಮದಲ್ಲಿ ಸ್ಥಾಪಿಸಿದ್ದ ಕೇಸರಿ ಬಣ್ಣದ ಅಂಬೇಡ್ಕರ್ ಪ್ರತಿಮೆಗೆ ಬಿಎಸ್ ಪಿ ನಾಯಕ ಹಿಮೇಂದ್ರ ಗೌತಮ್ ನೀಲಿ ಬಣ್ಣ ಬಳಿದಿದ್ದಾರೆ.
ಶನಿವಾರ ದುಷ್ಕರ್ಮಿಗಳಿಂದ ಧ್ವಂಸಗೊಂಡಿದ್ದ ಅಂಬೇಡ್ಕರ್ ಪ್ರತಿಮೆಯ ಬದಲಿಗೆ ನಿನ್ನೆ ಆದಿತ್ಯನಾಥ್ ಸರಕಾರ ಹೊಸ ಪ್ರತಿಮೆಯನ್ನು ಸ್ಥಾಪಿಸಿತ್ತು. ಈ ಪ್ರತಿಮೆಯ ಕೇಸರಿ ಬಣ್ಣ ಭಾರೀ ವಿವಾದ ಸೃಷ್ಟಿಸಿತ್ತು.
ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲೇ ಆಗ್ರಾದಲ್ಲಿ ನಿರ್ಮಿಸಲಾದ ಕೇಸರಿ ಪ್ರತಿಮೆಯನ್ನು ನಿನ್ನೆ ಸ್ಥಾಪಿಸಲಾಗಿತ್ತು. ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸುವ ಉದ್ದೇಶದಿಂದ ದುಷ್ಕರ್ಮಿಗಳು ಅಂಬೇಡ್ಕರ್ ಪ್ರತಿಮೆಗೆ ಹಾನಿಯೆಸಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Next Story