ಮಮತಾ ಬ್ಯಾನರ್ಜಿ ‘ಶೂರ್ಪನಖಿ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಶಾಸಕ
ಪ್ರಧಾನಿ ಮೋದಿ ಎಚ್ಚರಿಕೆ ಲೆಕ್ಕಕ್ಕಿಲ್ಲ
ಲಕ್ನೋ, ಎ.25: ವಿವಾದಾತ್ಮಕ ಹೇಳಿಕೆಗಳನ್ನು ನೀಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಶಾಸಕರು ಹಾಗು ಸಂಸದರಿಗೆ ಎಚ್ಚರಿಕೆ ನೀಡಿದ ಕೆಲ ದಿನಗಳಲ್ಲೇ ಬಿಜೆಪಿ ಶಾಸಕರೊಬ್ಬರು ಮಮತಾ ಬ್ಯಾನರ್ಜಿಯವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈಗಾಗಲೇ ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿರುವ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಮಮತಾ ಬ್ಯಾನರ್ಜಿಯವರನ್ನು ‘ಶೂರ್ಪನಖಿ’ ಎಂದು ನಿಂದಿಸಿದ್ದಾರೆ. ಪಶ್ಚಿಮ ಬಂಗಾಳವು ಜಮ್ಮು ಕಾಶ್ಮೀರ ಆಗಿ ಬದಲಾಗಲಿದೆ ಎಂದೂ ಅವರು ಹೇಳಿದ್ದಾರೆ.
“ಜನರು ಬೀದಿಬದಿಯಲ್ಲಿ ಕೊಲ್ಲಲ್ಪಡುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಏನೂ ಮಾಡುತ್ತಿಲ್ಲ. ಹಿಂದೂಗಳು ಬಂಗಾಳದಲ್ಲಿ ಸುರಕ್ಷಿತರಲ್ಲ. ಏನಾದರು ಮಾಡದಿದ್ದರೆ ಬಂಗಾಳವು ಜಮ್ಮು ಕಾಶ್ಮೀರವಾಗಲಿದೆ.” ಎಂದು ಲಕ್ನೋದಲ್ಲಿ ಸುರೇಂದ್ರ ಸಿಂಗ್ ಹೇಳಿದರು.
ಶಾಸಕ ಸುರೇಂದ್ರ ಸಿಂಗ್ ಈ ಹಿಂದೆಯೂ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸುದ್ದಿಯಾಗಿದ್ದರು.
Next Story