ಸಿಪಿಐ ರಾಷ್ಟ್ರೀಯ ಸಮಿತಿಗೆ ಕನ್ಹಯ್ಯಾ ಕುಮಾರ್
ಹಿರಿಯ ನಾಯಕರು ಔಟ್
ಹೊಸದಿಲ್ಲಿ, ಎ. 30: ಜವಾಹರ್ ಲಾಲ್ ನೆಹರು ವಿವಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ, ಖ್ಯಾತ ಯುವ ನಾಯಕ ಕನ್ಹಯ್ಯಾ ಕುಮಾರ್ ಕಮ್ಯುನಿಸ್ಟ್ ಪರ್ಟಿ ಆಫ್ ಇಂಡಿಯಾ (ಸಿಪಿಐ)ದ ರಾಷ್ಟ್ರೀಯ ಸಮಿತಿಗೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈ ಸಮಿತಿಯಲ್ಲಿ 125 ಮಂದಿ ಸದಸ್ಯರಿದ್ದಾರೆ.
ಎಸ್. ಸುಧಾಕರ್ ರೆಡ್ಡಿ ಅವರು ಸತತ ಮೂರನೇ ಅವಧಿಗೆ ಸಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಪುನರಾಯ್ಕೆಯಾಗಿದ್ದಾರೆ. ಕೇರಳದ ಕೊಲ್ಲಂನಲ್ಲಿ ನಡೆದ ಪಕ್ಷದ 23ನೆ ರಾಷ್ಟ್ರೀಯ ಸಮಾವೇಶದಲ್ಲಿ ಈ ಆಯ್ಕೆ ನಡೆದಿದೆ.
ಇದೇ ಸಂದರ್ಭದಲ್ಲಿ ಹಿರಿಯ ನಾಯಕರಾದ ಸಿ. ದಿವಾಕರಣ್, ಸತ್ಯನ್ ಮೊಕೇರಿ, ಸಿ.ಎನ್. ಚಂದ್ರನ್ ಹಾಗು ಕಮಲ ಸದಾನಂದನ್ ಅವರನ್ನು ರಾಷ್ಟ್ರೀಯ ಸಮಿತಿಯಿಂದ ಕೈ ಬಿಡಲಾಗಿದೆ.
ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುಧಾಕರ್ ರೆಡ್ಡಿ ಬಿಜೆಪಿ ವಿರುದ್ಧ ಹೋರಾಡಲು ಎಡ, ಜಾತ್ಯಾತೀತ ರಂಗ ಒಂದನ್ನು ರೂಪಿಸಲಾಗುವುದು ಎಂದು ಹೇಳಿದರು.
Next Story