ಹುಟ್ಟುಹಬ್ಬದ ಪಾರ್ಟಿಯಲ್ಲಿ ಯುವಕನ ಕೊಲೆ
ಹೊಸದಿಲ್ಲಿ, ಮೇ 7: ಹುಟ್ಟು ಹಬ್ಬ ಆಚರಣೆಯಲ್ಲಿ ಪಾಲ್ಗೊಂಡಿದ್ದ ಯುವಕ ನೋರ್ವನನ್ನು ಇರಿದು ಕೊಲೆಗೈದ ಘಟನೆ ದಿಲ್ಲಿಯ ಬಾರ್ ಒಂದರಲ್ಲಿ ಸೋಮವಾರ ನಡೆದಿದೆ.
20ರ ಹರೆಯದ ಯುವಕ ಇಸ್ಮಿತ್ ತನ್ನ ಹುಟ್ಟುಹಬ್ಬವನ್ನು 10 ಮಂದಿ ಗೆಳೆಯರೊಂದಿಗೆ ಬಾರ್ನ ಮೂರನೇ ಮಹಡಿಯಲ್ಲಿ ಆಚರಿಸಿಕೊಳ್ಳುತ್ತಿದ್ದ. ಈ ಗುಂಪಿನಲ್ಲಿದ್ದ ವಿಜಯದೀಪ್ ಡಿ.ಜೆ. ದೀಪಕ್ ಬಿಸ್ತ್ನಲ್ಲಿ ಹಾಡು ಬದಲಾಯಿಸಲು ವಿನಂತಿಸಿದ್ದ. ಆದರೆ, ಆತ ನಿರಾಕರಿಸಿದ್ದ. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವಾಗ್ವಾದ ನಡೆಯಿತು. ಆಗ ಮಧ್ಯಪ್ರವೇಶಿಸಿದ ಇಸ್ಮಿತ್ ಹಾಗೂ ಗೆಳೆಯರು ಡಿಜೆ ಹಾಗೂ ಬಾರ್ನ ಇತರ ಸಿಬ್ಬಂದಿಯೊಂದಿಗೆ ಜಗಳಕ್ಕಿಳಿದರು. ಚೆಯರ್ ಹಾಗೂ ಬೀಯರ್ ಬಾಟಲಿಗಳನ್ನು ಎಸೆದರು. ಈ ಸಂದರ್ಭ ಜಿ.ಡಿ. ದೀಪಕ್ ಬಿಸ್ತಿ ಜಿಮ್ ಇನ್ಸ್ಟ್ರಕ್ಟರ್ ವಿಜಯ್ ದೀಪ್ಗೆ ಇರಿದು ಹತ್ಯೆಗೈದಿದ್ದಾನೆ. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಡಿ.ಜೆ. ದೀಪಕ್ ಬಿಸ್ತ್ನನ್ನು ಬಂಧಿಸಿದ್ದಾರೆ.
Next Story