ಮೋದಿ ಶ್ರೀರಾಮನ ಪುನರ್ಜನ್ಮ ಎಂದ ಬಿಜೆಪಿ ಶಾಸಕ!
ಇವರ ಪ್ರಕಾರ ಅಮಿತ್ ಶಾ, ಆದಿತ್ಯನಾಥ್ ಯಾರು ಗೊತ್ತಾ?
ಬಲಿಯಾ, ಮೇ 11: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶ್ರೀರಾಮನ ಅವತಾರವಾಗಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗಿರುವ ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿದ್ದಾರೆ.
ಅಮಿತ್ ಶಾರನ್ನು ಶ್ರೀರಾಮನ ಸಹೋದರ ಲಕ್ಷ್ಮಣನಾಗಿ ಹಾಗು ಚಾಣಕ್ಯನಾಗಿ ದೇವರು ಕಳುಹಿಸಿದ್ದಾರೆ ಎಂದು ಸುರೇಂದ್ರ ಸಿಂಗ್ ಹೇಳಿದ್ದಾರೆ. ಇನ್ನೂ ಮುಂದುವರಿದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಬಗ್ಗೆ ಮಾತನಾಡುತ್ತಾ, “ನೋಡಿ ಕಾಕತಾಳೀಯ ಎಂಬಂತೆ ಬ್ರಹ್ಮಚಾರಿ ಹನುಮಾನ್ ಆಗಿ ಯೋಗೀಜಿ ಬಂದಿದ್ದಾರೆ” ಎಂದವರು ಹೇಳಿದ್ದಾರೆ.
“ರಾಮ, ಲಕ್ಷ್ಮಣ ಹಾಗು ಹನುಮಾನರ ಈ ತಂಡ ಭಾರತದಲ್ಲಿ ರಾಮರಾಜ್ಯದ ಕನಸನ್ನು ಅರಿತುಕೊಳ್ಳುತ್ತಾರೆ. ರಾಷ್ಟ್ರೀಯ ರಾಜಕಾರಣದಲ್ಲಿ ರಾಮರಾಜ್ಯ ಸ್ಥಾಪನೆಯಾಗುತ್ತದೆ” ಎಂದು ಅವರು ಇದೇ ಸಂದರ್ಭ ಹೇಳಿದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು 'ಶೂರ್ಪನಖಿ'ಗೆ ಹೋಲಿಸಿ, ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳಿಗೆ ಪೋಷಕರೇ ಕಾರಣ ಎಂದು ಈ ಶಾಸಕ ಈ ಹಿಂದೆಯೂ ವಿವಾದ ಸೃಷ್ಟಿಸಿದ್ದರು.
Next Story