ಎರಡು ದಿನಗಳ ರಾಜ್ಯಪಾಲರ ಸಮಾವೇಶಕ್ಕೆ ನಾಳೆ ಚಾಲನೆ
ಸ್ವಚ್ಛ ಭಾರತ ಅಭಿಯಾನ,ಆಂತರಿಕ ಸುರಕ್ಷತೆ ಕುರಿತು ಚರ್ಚೆ
ಹೊಸದಿಲ್ಲಿ,ಜೂ.3: ಎರಡು ದಿನಗಳ ರಾಜ್ಯಪಾಲರು ಮತ್ತು ಉಪ ರಾಜ್ಯಪಾಲರ ಸಮಾವೇಶವು ಇಲ್ಲಿಯ ರಾಷ್ಟ್ರಪತಿ ಭವನದಲ್ಲಿ ಸೋಮವಾರದಿಂದ ಆರಂಭಗೊಳ್ಳಲಿದ್ದು,ಸ್ವಚ್ಛ ಭಾರತ ಅಭಿಯಾನ ಮತ್ತು ಆಂತರಿಕ ಸುರಕ್ಷತೆ ಕಾರ್ಯಸೂಚಿಯಲ್ಲಿನ ಮುಖ್ಯ ವಿಷಯಗಳಾಗಿವೆ.
ಇದು ಇಂತಹ 49ನೇ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಧ್ಯಕ್ಷತೆಯನ್ನು ವಹಿಸುತ್ತಿರುವ ಎರಡನೇ ಸಮಾವೇಶವಾಗಿದೆ.
ಮೊದಲ ಸಮಾವೇಶ 1949ರಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆದಿದ್ದು,ಆಗ ಭಾರತದ ಗವರ್ನರ್ ಜನರಲ್ ಆಗಿದ್ದ ಸಿ.ರಾಜಗೋಪಾಲಾಚಾರಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ವರ್ಷದ ಸಮಾವೇಶವು ವಿವಿಧ ಅಧಿವೇಶನಗಳಲ್ಲಿ ಪ್ರಮುಖ ವಿಷಯಗಳನ್ನು ಚರ್ಚಿಸಲಿದೆ ಎಂದು ರಾಷ್ಟ್ರಪತಿ ಭವನದ ಹೇಳಿಕೆಯು ತಿಳಿಸಿದೆ.
Next Story