ಗಡಿ ನುಸುಳಿವಿಕೆ ವಿಫಲಗೊಳಿಸಿದ ಸೇನೆ
ಮೂವರು ಉಗ್ರರ ಹತ್ಯೆ ಶ್ರೀನಗರ, ಜೂ. 6: ಜಮ್ಮು ಹಾಗೂ ಕಾಶ್ಮೀರದ ಮಚ್ಚಿಲ್ ವಲಯದಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಬುಧವಾರ ಒಳ ನುಸುಳುವಿಕೆಯನ್ನು ವಿಫಲಗೊಳಿಸಿರುವ ಸೇನಾ ಪಡೆ ಮೂವರು ಉಗ್ರರರನ್ನು ಹತ್ಯೆಗೈದಿದೆ. ಕುಪ್ವಾರ ಜಿಲ್ಲೆಯ ಮಚ್ಚಿಲ್ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ ಸಂದೇಹಾಸ್ಪದ ಚಲನವಲನವನ್ನು ಸೇನಾ ಪಡೆ ಗಮನಿಸಿತು ಹಾಗೂ ನುಸುಳು ಕೋರರ ವಿರುದ್ಧ ದಾಳಿ ನಡೆಸಿತು ಎಂದು ಸೇನಾ ಅಧಿಕಾರಿ ತಿಳಿಸಿದ್ದಾರೆ. ಯೋಧರು ಹಾಗೂ ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ. ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.
Next Story