ಅಬ್ದುಲ್ ಕಲಾಂ ನಂತರ ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ ಕೂಟ ಏರ್ಪಡಿಸದ ರಾಮನಾಥ್ ಕೋವಿಂದ್
ಹೊಸದಿಲ್ಲಿ, ಜೂ.7: ಈ ಬಾರಿ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಇಫ್ತಾರ್ ಕೂಟವನ್ನು ಏರ್ಪಡಿಸುವುದಿಲ್ಲ ಎಂದು ತಿಳಿದುಬಂದಿದೆ.
“ರಾಷ್ಟ್ರಪತಿ ಭವನದಂತಹ ಸರಕಾರಿ ಕಚೇರಿಯಲ್ಲಿ ತೆರಿಗೆ ಪಾವತಿದಾರರ ಹಣದಿಂದ ಧಾರ್ಮಿಕ ಆಚರಣೆಗಳನ್ನು ನಡೆಸುವುದಿಲ್ಲ ಎಂದು ರಾಷ್ಟ್ರಪತಿ ಅಧಿಕಾರ ವಹಿಸಿದಾಗಲೇ ನಿರ್ಧರಿಸಿದ್ದರು. ಇದು ಜಾತ್ಯಾತೀತ ತತ್ವಗಳನ್ನು ಅನುಸರಿಸುವುದಾಗಿದೆ ಹಾಗು ಎಲ್ಲಾ ಧರ್ಮದ ಆಚರಣೆಗಳಿಗೂ ಅನ್ವಯವಾಗಲಿದೆ” ಎಂದು ರಾಷ್ಟ್ರಪತಿಯವರ ಮಾಧ್ಯಮ ಕಾರ್ಯದರ್ಶಿ ಅಶೋಕ್ ಮಲಿಕ್ ತಿಳಿಸಿದ್ದಾರೆ.
ದಶಕಗಳ ನಂತರ ರಾಷ್ಟ್ರಪತಿ ಭವನದಲ್ಲಿ ಈ ಬಾರಿ ಇಫ್ತಾರ್ ಕೂಟ ಇರುವುದಿಲ್ಲ 2002ರಿಂದ 2007ರವರೆಗೆ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ರಾಷ್ಟ್ರಪತಿಯಾಗಿದ್ದ ಸಂದರ್ಭವೂ ಅವರು ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ ಕೂಟವನ್ನು ಹಮ್ಮಿಕೊಂಡಿರಲಿಲ್ಲ.
Next Story