ಕಾಶ್ಮೀರದಲ್ಲಿ ಮತ್ತೆ ಉಗ್ರರ ಉಪಟಳ: ಗುಂಡಿನ ದಾಳಿ
ಶ್ರೀನಗರ, ಜೂ. 16: ಇಲ್ಲಿನ ಲಾಲ್ಚೌಕ್ನಲ್ಲಿ ಪತ್ರಕರ್ತ ಶುಜಾತ್ ಬುಖಾರಿ ಹಾಗೂ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ 24 ಗಂಟೆಗಳಲ್ಲೇ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ.
ಮೋಟರ್ಸೈಕಲ್ನಲ್ಲಿ ಬಂದ ಮೂವರು ಎಸ್ಎಂಎಸ್ಎಚ್ ಆಸ್ಪತ್ರೆ ಚೆಕ್ಪೋಸ್ಟ್ ಬಳಿ ಗುಂಡಿನ ದಾಳಿ ನಡೆಸಿ ಇಬ್ಬರು ನಾಗರಿಕರು ಹಾಗೂ ಇಬ್ಬರು ಪೊಲೀಸರನ್ನು ಗುಂಡು ಹೊಡೆದು ಗಾಯಗೊಳಿಸಿದ್ದಾರೆ.
ದಾಳಿಯಲ್ಲಿ ಮುಖ್ಯಪೇದೆ ಹಬೀಬುಲ್ಲಾ ಎಂಬವವರು ತೀವ್ರವಾಗಿ ಗಾಯಗೊಂಡಿದ್ದು, ರಸ್ತೆ ಪಕ್ಕ ಚಪ್ಪಲಿ ಹೊಲಿಯುತ್ತಿದ್ದ ಒಬ್ಬ ವ್ಯಕ್ತಿ ಕೂಡಾ ಗುಂಡೇಟಿನಿಂದ ಗಾಯಗೊಂಡಿದ್ದಾರೆ.
ಉಳಿದಂತೆ ಪುಲ್ವಾಮಾದಲ್ಲಿ ಕಲ್ಲು ತೂರಾಟಗಾರರ ಮೇಲೆ ಭದ್ರತಾ ಪಡೆ ಸಿಬ್ಬಂದಿ ಗುಂಡು ಹಾರಿಸಿದ ಘಟನೆಯಲ್ಲಿ ವಿಕ್ವಾಸ್ ಅಹ್ಮದ್ ರಾಥೇರ್ (17) ಎಂಬ ಯುವಕ ಬಲಿಯಾಗಿದ್ದಾನೆ. ಈ ಮಧ್ಯೆ ಗುಂಡೇಟಿಗೆ ಬಲಿಯಾದ ಬುಖಾರಿಯವರನ್ನು ಬಾರಾಮುಲ್ಲಾ ಬಳಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ದಫನ ಮಾಡಲಾಯಿತು.
Next Story