ಪಿಡಿಪಿ ಕಾರ್ಯಕರ್ತನ ಪತ್ನಿಯ ಕತ್ತು ಸೀಳಿ ಹತ್ಯೆ
ಹೊಸದಿಲ್ಲಿ, ಜು. 9: ಪಿಡಿಪಿ ಕಾರ್ಯಕರ್ತನ ಪತ್ನಿಯನ್ನು ಇಬ್ಬರು ಅಪರಿಚಿತ ಬಂದೂಕುಧಾರಿಗಳು ಕತ್ತುಸೀಳಿ ಹತ್ಯೆಗೈದ ಘಟನೆ ರವಿವಾರ ಜಮ್ಮು ಹಾಗೂ ಕಾಶ್ಮೀರದ ಬಂಡಿಪೋರಾದ ಸಾಹ್ಗಂಡ್ ಗ್ರಾಮದಲ್ಲಿ ನಡೆದಿದೆ.
ಪಿಡಿಪಿ ಕಾರ್ಯಕರ್ತ ಅಬ್ದುಲ್ ಮಜೀದ್ ದಾರ್ ಅವರ ನಿವಾಸಕ್ಕೆ ನುಗ್ಗಿದ ಇಬ್ಬರು ಬಂದೂಕು ಧಾರಿಗಳು ಅವರನ್ನು ಅಪಹರಿಸಲು ಯತ್ನಿಸಿದರು. ಇದಕ್ಕೆ ದಾರ್ ಅವರ ಪತ್ನಿ ಶಕೀಲಾ ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭ ಬಂದೂಕುಧಾರಿಗಳು ಶಕೀಲಾ ಅವರ ಮೇಲೆ ದಾಳಿ ನಡೆಸಿ ಕತ್ತು ಸೀಳಿದರು. ಕೂಡಲೇ ಶಕೀಲಾ ಅವರನ್ನು ಶ್ರೀನಗರದಲ್ಲಿರುವ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು.
Next Story