ತನ್ನ ವಿರುದ್ಧವೇ ದೂರು ದಾಖಲಿಸಿದ ಪೊಲೀಸ್ ಅಧಿಕಾರಿ!
ಮೀರತ್, ಜು.15: ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಗೋಸಾಗಾಟ ತಡೆಯಲು ವಿಫಲವಾದ ಕಾರಣ ಪೊಲೀಸ್ ಅಧಿಕಾರಿಯೊಬ್ಬರು ತನ್ನ ವಿರುದ್ಧವೇ ದೂರು ದಾಖಲಿಸಿರುವ ಬಗ್ಗೆ ವರದಿಯಾಗಿದೆ. ಉತ್ತರ ಪ್ರದೇಶದ ಮೀರತ್ ಸ್ಟೇಷನ್ ಹೌಸ್ ಆಫೀಸರ್ ರಾಜೇಂದ್ರ ತ್ಯಾಗಿ ಎಂಬ ಹೆಸರಿನ ಈ ಅಧಿಕಾರಿ, ತಾನು ಈ ಸ್ಟೇಷನ್ ನಲ್ಲಿ ಕೆಲಸಕ್ಕೆ ಸೇರುವ ಮೊದಲು ಪೊಲೀಸರು ತಪ್ಪು ಮಾಡಿದರೂ ಕ್ರಮ ಕೈಗೊಳ್ಳುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದೆ ಎಂದು ಹೇಳುತ್ತಾರೆ.
"ಅಪರಾಧವೊಂದರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪೊಲೀಸರೇ ಹೊಣೆ ಎನ್ನುವ ನಿಯಮವನ್ನು ನಾನು ಆರಂಭಿಸಿದ್ದೆ. ಕಳವು ಅಥವಾ ಕೊಲೆಯಂತಹ ಘಟನೆಗಳು ನಡೆದರೆ ಅದರ ಹೊಣೆ ಆಯಾಯಾ ಪ್ರದೇಶದ ಕಾನ್ ಸ್ಟೇಬಲ್ ಗಳ ಮೇಲಿರುತ್ತದೆ.
ಎರಡಕ್ಕಿಂತ ಹೆಚ್ಚು ಬಾರಿ 'ನಿರ್ಲಕ್ಷ್ಯ' ವಹಿಸಿರುವುದು ಪತ್ತೆಯಾದಲ್ಲಿ ಕಾನ್ ಸ್ಟೇಬಲ್ ವಿರುದ್ಧವೇ ಕ್ರಮ ಕೈಗೊಳ್ಳಲಾಗುವುದು" ಎಂದವರು ಹೇಳಿದರು.
Next Story